This page has not been fully proofread.

೪೯
 
ಮಡದಿ ರೇವತಿಯ ಮುಖವು ಮೂಡಿದಾ ಕಳ್ಳುಹಾಲ ಕುಡಿದ
ಕೃಷ್ಣನಣ್ಣನಾ ಸಮರ ತೊರೆದು ಒಲಿದಿವಳ ದಂಡೆ ಹಿಡಿದ ।
ಕುಡಿಯೊ ನೀನು ಸರಸತಿಯ ನೀರ ಬಲರಾಮನನ್ನು ನಂಬಿ
ಬಣ್ಣವಿರಲಿ ಕರಿ ; ಬೆಳ್ಳಗಾಗು ಒಳಗೆಲ್ಲ ಬೆಳಕು ತುಂಬಿ ।
 
೫೦
 
ಜನ್ನು ಕನ್ನೆ ತೊರೆದಿಳಿದಳಣ್ಣ ಕನಖಲದ ಮಲೆಯ ಬಳಿಗೆ
ಸಗರ ಸಂತತಿಗೆ ಸ್ವರ್ಗದೊಂದು ಸೋಪಾನವಾಗಿ ಇಳೆಗೆ ।
ಗೌರಿ ಮುರಿವಳಬ್ಬಬ್ಬ ಹುಬ್ಬ-ಎನೆ ನಕ್ಕು ನೊರೆಗಳಿಂದ
ಜಗ್ಗುತಿಹಳು ಶಿವಜಡೆಯ ಚಂದ್ರಮಣಿ ಕೈಯ ತೆರೆಗಳಿಂದ
 
೫೧
 
ನೀನು ಬಾನಿನಲಿ ಕಾಲು ಸೋತು ಬರೆ, ಗಂಗೆ ಕುಡಿಯಲೆಂದು
 
ಸ್ವರ್ಗದಾನೆಯೇ ಸೊಂಡೆ ಚಾಚಿದೊಲು ಕಾಂಬೆ ನೋಟವೊಂದು
ಬೇರೆ ಕಾಣುವದು ನೋಟ, ನೀರಿನಲ್ಲಿ ಛಾಯೆ ಮೂಡಿದಂತೆ
ಗಂಗೆಯ ಮತ್ತೊಂದು ಕಡೆಗೆ ಆ ಯಮುನೆ ಕೂಡಿದಂತೆ
 
೫೨
 
ಮಂಜು-ಬೆಟ್ಟ ಮುಡಿಯಟ್ಟದಲ್ಲಿ ಕಸ್ತೂರಿ ಮೆಟ್ಟಿನಲ್ಲಿ
ಇಳೆಯ ತೊಳೆಯೆ, ಹೊಳೆಯಾಗಿ ಬರುವ ಸಿರಿಗಂಗೆ ಹುಟ್ಟಿನಲ್ಲಿ
ದಾರಿದಣಿವಿಕೆಯ ಕಳೆಯೊ ನೀನು ಆ ಕೋಡಿನಲ್ಲಿ ಕುಂತು
ಶಿವನ ನಂದಿ ಕೋಡೆತ್ತಿ ಒಗೆದ ಕರಿ ಮಣ್ಣ ಮುದ್ದೆಯಂತು ।
 
ದೇವದಾರು ಮರ ತಾಕಲಾಡಿ, ದಾವಾಗ್ನಿ ಕಿಡಿಯ ಸೊಸೆ
ಹೊತ್ತಿ ಬಾಲ, ಸುತ್ತಾಡಿ ಚಮರಿಮೃಗವೆತ್ತಿ ಬಾಲ ಬೀಸೆ ।
ಕುತ್ತದಲ್ಲಿ ಇರೆ ಸುರಿಸು ನೀರು ; ಉರಿ ಈಡೆ ನಿನ್ನ ಮಳೆಗೆ ?
ಕಷ್ಟ ಕಳೆವುದೇ ಇಷ್ಟವಹುದು ಉತ್ತಮರ ಶಕ್ತಿಗಳಿಗೆ ।
 
೫೪
 
ಸಿಟ್ಟಿನಿಂದ ಸಿಡಿದೆದ್ದು ಶರಭ ಬರೆ ತಾಗಿ, ಕಂಡು ಮಿದುವು.
ಮೂಳೆಗಳನ್ನು ಮುರಿಕೊಳ್ಳಲೆಂದು ಹವಣಿಸಿದ ಹಾಗೆ ಅದುವು ।
ಆಲಿಕಲ್ಲಿನಿಂದಿಟ್ಟು ಕುಟ್ಟು , ಅದರಂಥ ಮೂಢರೊಳರೇ ?
ಮುಗಿಲಿಗೆಂದು ಕೈ ಹಾಕಿ ಹಾರಿದರೆ ಕಾಲು ಮುರಿದು ಕೊಳರೇ ? ।
ಕನ್ನಡ ಮೇಘದೂತ - ಭಾವಾನುವಾದ ಖಂಡಕಾವ್ಯ : ಲೇ : ದ. ರಾ. ಬೇಂದ್ರೆ (ಅಂಬಿಕಾತನಯದತ್ತ) ೨೩
 
-