This page has not been fully proofread.

೪೩
 
11
 
2
ಈ ಗಿರಿಯ ಜೀವ, ಆ ಸ್ಕಂದದೇವ, ಅಭಿಷೇಕ ಮಾಡು ಬಾಗಿ
ಹೂ ಮೋಡದಿಂದ ಹೂಮಳೆಯ ಸುರಿಸು ನೀ ಬಾನಗಂಗೆಯಾಗಿ
ಸುರರಾಜ್ಯ ಸೈನ್ಯ ರಕ್ಷಣೆಗೆ ಬಂದ ಶಿವವೀರ್ಯದೊಂದು ಮೂರ್ತಿ
ಅವ ಮಿಗಿಲು ಹಗಲಿಗೂ, ಉರಿಯ ಕಂದ, ಕಿರುಕುಳವೆ ಅಂಥ ಕೀತಿ
 
ಅಲ
 

 
ಉದುರಿದ್ದ ನವಿಲಗರಿ ಮುತ್ತಿ ಎತ್ತಿ ಕಣೋತ್ತಿ ಶಿವೆಯು ಕಿವಿಗೆ
ನೈದಿಲೆಯ ಬಳಿಗೆ ಇರಿಸುವಳು ಅವಳು ಮಗನೊಂದು ಮುದ್ದು ಸವಿಗೆ
ಶಿವಮೌಳಿ ಚಂದ್ರಕಳೆಗಿಂತ ಬೆಳ್ಳಗುಡಿಗಣ್ಣ ನವಿಲ ಕುಣಿಸು
ಅಗೊ ನಿನ್ನ ಮೊಳಗು, ಆ ಗುಡ್ಡದೊಳಗು, ಸೊಲ್ಲಾಗುವಂತೆ ತಣಿಸು
 
೪೫
 
ಹರಶರಗಳಲ್ಲಿ ಹುಟ್ಟಿದ್ದ ದೇವನಾ ಸೇವೆಯಾಗೆ ಲೀಲೆ
ವರ ಸಿದ್ಧದ್ವಂದ್ವಗಳು ವೀಣೆಗೂಡಿ, ಮಳೆ-ಹಾದಿ ಬಿಟ್ಟ ಮೇಲೆ
ಗೋಯಾಗದೊಂದು ಅನುರಾಗದಿಂದ ಬರುವಲ್ಲಿ ಬಾರೊ ಸುರಿಯೆ
 
ಹಾತೊರೆವ ಚರ್ಮವತಿ ರಂತಿದೇವನಾ ಕೀರ್ತಿಯಂತೆ ಮೆರೆಯೆ ॥
೪೬
 
ಕೃಷ್ಣವರ್ಣವನೆ ಕಳವು ಮಾಡಿದಾ ಮೋಡ ನೀನು ತಗ್ಗಿ
ನದಿಯ ನೀರು ಕುಡಿವಾಗ ಕಾಣುವಿಯೊ, ಬಾನಿನಲ್ಲಿ ಹಿಗ್ಗಿ
ನೋಡಲಿರುವ ಆ ದೇವಜಾತಿಗಳ ಕಣೆ ಜಾಲವಾಗಿ
ಭೂಮಿ ತೊಟ್ಟ ಅಣಿಮುತ್ತು ಹಾರದಲ್ಲಿ ಇಂದ್ರನೀಲವಾಗಿ
 
೪೭
 
ಮುಂದೆ ದಶಪುರದ ಹೆಣ್ಣ ಹುಬ್ಬು ಕರೆಯುವದು ಲೋಲವಾಗಿ
ಎವೆಗಳಾಟದಲಿ ನೋಟವೆಸೆಯುತಿರೆ ಕಪ್ಪು ನೀಲವಾಗಿ
ಯಾರ ಕಣ್ಣು ಹೋಲುವವು ಮೊಲ್ಲೆಯೊಡನಾಡಿ-ತುಂಬಿಯನ್ನು
ಅವರ ಕಣ್ಣ ಕುತುಕಕ್ಕೆ ನೀಡು ನಿನ್ನಾತ್ಮಬಿಂಬವನ್ನು
 
೪೮
 
ಬಾರೊ ದಾಟಿ ಬಹ್ಮಾಧಿವರ್ತವನು ನಿನ್ನ ಛಾಯೆ ಚೆಲ್ಲಿ
ಎಲ್ಲಿ ಇಂದಿಗೂ ಹಿಂದಿನೆಲಬು ಆ ಕುರುಕ್ಷೇತ್ರದಲ್ಲಿ
ಅರಸುಗಿರಸುಗಳ ಚೆಂಡು ಕಳೆದ ಗಾಂಡೀವಧನ್ವ ಅಂದು
ನೀನು ಕಮಲಗಳ ಸೆಳೆವ ಹಾಗೆ ಮಳೆ ಬೆಳಕಿನಿಂದ ಇಂದು
 
೨೨ ಕನ್ನಡ ಮೇಘದೂತ - ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂ
 
-