This page has been fully proofread once and needs a second look.

೩೭
 
ರಮಣರತ್ತ ಉಜ್ಜಯನಿ ರಮಣಿಯರು ಹೊರಟ ರಾತ್ರಿಯಲ್ಲಿ

ರಾಜಬೀದಿ ಕಗ್ಗತ್ತಲಾಗಿ ಕಂಗೆಡಿಸೆ, ಮಿಂಚ ಚೆಲ್ಲಿ
 

 

ದಾರಿದೋರು ಹೊಂಬೆಳಕ ಮಾಡಿ ಮಳೆ ಗುಡುಗು ಬೇಡೊ ಮೇಘಾ

ಮೊದಲೆ ಹೆದರಿದವರವರೆರೊ, ಕಳುವಿನಲಿ ಹೋಗಬೇಕು ಬೇಗಾ
 
20
 
॥ ೩೭
 
ಪಾರಿವಾಳ ಹಲವಾರು ಮಲಗಿದೇಳನೆಯ ಮಾಡದೊಳಗೆ

ಮಿಂಚು ಮಡದಿ ಬಳಲಿರುವಳೇನೊ ? ಮಲಗಲ್ಲಿ ಬೆಳ್ಳಬೆಳಗೆ ।

ಮುಂದೆ ದೂಡುವದು ನಿನ್ನನುದಯದಲಿ ನಮ್ಮ ನಿಮ್ಮ ನಂಟೇ

ಗೆಳೆಯಗಾಗಿ ಕೈಕೊಂಡ ಕೆಲಸವನು ನಡುವೆ ಬಿಡುವರುಂಟೇ ॥
 
೩೮
 
ಒಂಟಿಯಾಗಿ ಇರುಳುದ್ದ ಕಳೆದ ಸತಿಗಾಗಿ ರವಿಯು ಬಹನು

ಸಾವಿರಾರು ಕರ ಚಾಚಿ ಕಮಲೆಯರ ಕಣ್ಣನೊರಿಸಲಿಹನು

ತನ್ನ ಹೆಂಡಿರನು ತಾನೆ ತವಿಸದಿನ್ನಾರು ಶಮಿಸಲಹುದು

ಅಡ್ಡ ನೀನು ಇರಬೇಡ ರವಿಗೆ ; ಅವ ಕೆಂಡವಾಗಬಹುದು
 
೪೦
 
॥ ೩೯
 
ಹೆಸರಿನಂತೆ ಗಂಭೀರೆ ಧೀರೆ ತಿಳಿನೀರೆ ಜಲದೊಳವಳ

ಸೇರಬಲ್ಲೆ ನೆರಳಾದರೇನು ? ಸರಿ, ನೀನು ನೀರನಿವಳ ॥

ಅವಳು ನೋಡುವಳು ಚಪಲ ಮೀನ ಚಳಕುಮುದ ನೇತ್ರೆಯಾಗಿ

ತಿರುಗಿ ನೋಡು ಇಹಳವಳು ನಿನ್ನ ಅನುರೂಪ ಕ್ಷೇತ್ರವಾಗಿ
 

 

 
ಕೈಯ ಚಾಚಿ ತಡೆವಂತೆ ನಾಚಿ ನೀರ್ಬೆತ್ತ ಬಾಗಿ ಎಳೆದು

ಹಿಡಿದರೇನವಳ ಮುಗಿಲ ಬಣ್ಣದಾ ಮಂಜುಸೀರೆ ಸೆಳೆದು ॥

ಒಯ್ಯೋ ನಿನ್ನ ಜೊತೆಗಿರಲಿ, ಮೇಘವೇ, ಪಯಣ ಬೆಳೆಸುವಾಗ

ಉಂಡು ಒಮ್ಮೆ ಬಿಡಬಹುದದಾರು ಬರಿ ಬಚ್ಚ ಚೆಲುವು ಭೋಗ
 

 
MA
 

 
ನಿನ್ನ ಉಸಿರ ಹನಿ ಸೋಕಿ, ನೆಲದ ನರುಗಂಪು ಹೊಮ್ಮಿ ತಾಗಿ ।

ಬಂದ ಗಾಳಿ ಕುಡಿದಾನೆ ತಾನೆ ಹರಿ ಮೂಗೆ ಸೊಂಡಿಲಾಗಿ

ಕಾಡ ಅತ್ತಿ ಹಣೋಣ್ಗೊಳಿಸುವಂಥ ತಂಗಾಳಿ ಇದಿರು ಬಂದು

ದೇವಗಿರಿಯ ಸೇರಿಸುವದಣ್ಣ, 'ಬಿಜ ಮಾಡಿ ತಾವು' ಎಂದು
॥ ೪೦ ಕನ್ನಡ ಮೇಘದೂತ – ಅಂಬಿಕಾತನಯದತ್ತರ ಭಾವಾನುವಾದ : ಸಂ. : ವಾಮನ ಬೇಂದ್ರೆ