This page has not been fully proofread.

ಮಹಾಕವಿ ಕಾಳಿದಾಸನಿಗೆ ನಮನ
 
ನಮೋ ಎಂಬೆ ಕವಿ ಗುರುವೆ ತಣಿಸಿತೋ, ಅಮರದೂತ ಮೇಘಾ !
ನಿನ್ನ ಇನಿಯಳಂತೆಯೇ ನನ್ನನೂ, ದಿವ್ಯಕಾವ್ಯದೋಘಾ !
ಇಂದ್ರ ಮಾಯೆಯನು, ಭಾವಛಾಯೆಯನು ನೂರು ಕಡೆಗೆ ಚೆಲ್ಲಿ
ಅಮೃತಗರೆವುದಿದು ರಸಿಕ ಹೃದಯದಲಿ, ದಿಗ್ದಿಗಂತದಲ್ಲಿ .
 
ಅಂಬಿಕಾತನಯದತ್ತರ
 
ಕನ್ನಡ ಮೇಘದೂತ
ಪೂರ್ವ ಮೇಘ
 
"ಕಾಮಸ್ತದಗ್ರೇ ಸಮವರ್ತತಾಧಿ । ಮನಸೋ ರೇತಃ ಪ್ರಥಮಂ ಯದಾಸೀತ್ ।
ಸತೋಬಂಧಮಸತಿ ನಿರವಿಂದನ್ ಹೃದಿ ಪ್ರತೀಷ್ಯಾ ಕವಯೋ ಮನೀಷಾ "
 
ಕನ್ನಡ ಮೇಘದೂತ – ಭಾವಾನುವಾದ ಖಂಡಕಾವ್ಯ : ಲೇ : ದ. ರಾ. ಬೇಂದ್ರೆ (ಅಂಬಿಕಾತನಯದತ್ತ) ೧೧