This page has not been fully proofread.

"ಶಂಕರರ ಭಾಷ್ಯವನು ಖಂಡಿಸಿದಿರಿಂತು
ಅತ್ಯಂತ ಉತ್ಕೃಷ್ಟ ಜ್ಞಾನಿಗಳು ತಾವು
ದೋಷರಹಿತಾರ್ಥಗಳ ಸೂತ್ರಭಾಷ್ಯವ ರಚಿಸಿ
ಉದ್ಧರಿಸಿರೆಮ್ಮನ್ನು ಆಚಾರ್ಯವರ್ಯ'
ಇಂತು ಬಿನ್ನಿಸಿದರು ನೆರೆದಿದ್ದ ಮಂದಿ
ಆಚಾರ್ಯ ನುಡಿ ಕೇಳಿ ಅಪ್ರತಿಭರಾಗಿ
 
ಬ್ರಹ್ಮಸೂತ್ರದ ಪ್ರವಚನ
 
ಜನರ ಮನವಿಗೆ ಒಲಿದು ಆನಂದತೀರ್ಥರು
ಒಡನೆ ತೊಡಗಿದರವರು ವಾಕ್ಯಾರ್ಥದಲ್ಲಿ
ಕ್ಲಿಷ್ಟ ಶಬ್ದಾರ್ಥಗಳ ಸರಳವಾಗಿರಿಸಿ
ಅವುಗಳನ್ವಯವನ್ನು ಸರಿಯಾಗಿ ಹೊಂದಿಸಿ
ಶೃತಿ ಸ್ಮೃತಿಗೆ ಸಮ್ಮತದ ವ್ಯಾಖ್ಯಾನ ಬಿಡಿಸಿ
ಬ್ರಹ್ಮ ಸೂತ್ರಗಳರ್ಥ ಸ್ಪುಟ ಪಡಿಸಿದರಿನ್ನಷ್ಟು
 
ಪರರಸುಜ್ಞಾನದಲ್ಲಿ ಮಾತ್ಸರ್ಯ ತಳೆದವರು
ತರ್ಕ ಸತ್ಪಥವನ್ನು ತೊರೆದ ದುರ್ಜನರು
ತರ್ಕ ಜಿಜ್ಞಾಸುಗಳು ; ದ್ವೇಷವನು ತೊರೆದವರು
ಈ ಪರಿಯ ವಿಧವಿಧದ ಮಂದಿಗಳನೆದುರಿಸಿ
ತಮ್ಮದೇ ಶೈಲಿಯಲ್ಲಿ ಆನಂದತೀರ್ಥರು
ವಿಜಯವನು ಸಾರಿದರು ನಿರ್ಲಿಪ್ತರಾಗಿ
 
ಸೌಮ್ಯ ಮನಪ್ರವೃತ್ತಿ ಮಧ್ಯಗೇಹರ ಗುಣವು
ಇಂತಿರಲು ಒಮ್ಮೆ, ಆ ತಂದೆ, ಒಂದು ದಿನ
ಮಗನ ಬಳಿಗೈತಂದು ಮುದಗೊಂಡರು
ಹಿಂದೊಮ್ಮೆ ಮಗನಲ್ಲಿ ವಿರಸ ನುಸುಳಿದ್ದರೂ
ಸುಪ್ರಸನ್ನರು ಈಗ, ಮಗನ ಹಿರಿಮೆಯ ಕಂಡು
ಸಜ್ಜನರ ಸದ್ಗುಣಕೆ ಇದು ನಿದರ್ಶನವು
 
78/ ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23