This page has not been fully proofread.

ಇಷ್ಟಸಿದ್ಧಿಯು ಅನಿಷ್ಟ ಸಿದ್ಧಿಯಾಯಿತು
ಚತುರನಾಗಲಿ ಶಿಷ್ಯ ಮತ್ತಷ್ಟು ಎಂದು
ಬಯಸಿದರು ಪರಮಗುರು ಅಚ್ಯುತ ಪ್ರೇಕ್ಷರು
"ಇಪ್ಪಸಿದ್ಧಿ" ಎಂಬ ಛಲ ಜಾತಿ ವಾರಿಧಿಯ
ಪಠಣ ಬೋಧನವನ್ನು ಪ್ರಾರಂಭಿಸಿದರು
ಗುರುವ ಬೋಧನೆಯನ್ನು ಆಲಿಸಿದರಾದರೂ
ಮಹಿಮರಿಗೆ ಅದರಲ್ಲಿ ಸ್ವಲ್ಪವೂ ರುಚಿ ಇಲ್ಲ
 
"ಆದ್ಯಪದ್ಯಗಳಲ್ಲೇ ದೋಷಗಳು ಇಹುದು
ಅವುಗಳಾ ಸಂಖ್ಯೆ ಎರಡು ಹದಿನಾರಹುದು''
ಎಂದು ಅರುಹಿದ ಶಿಷ್ಯ, ಬಿಂಕದಲ್ಲಿ ನಿಂತು
"ಪರಿಹಾರ ದೊರೆಯುವುದು ಅವರೆಲ್ಲ ಮುಂದೆ
ಗುರುವ ಮಾತನು ಕೇಳಿ, ಶಿಷ್ಯನುಡಿದನು ಮತ್ತೆ
"ಏನದಕೆ ಉತ್ತರ ? ಈಗಲೇ ಹೇಳಿಬಿಡಿ"
 
ಕನಲಿದರು ಗುರುಗಳು, ಶಿಷ್ಯನಾ ನುಡಿ ಕೇಳಿ
ಮಾಯಾವಾದಧ್ವರ್ಯು ಅಚ್ಯುತ ಪ್ರೇಕ್ಷರು
ಮಾತ ಮುಂದರಿಸಿದರು ಶಿಷ್ಯನನ್ನು ಕುರಿತು
"ಪಾಠ ಹೇಳಲು ನಿಮಗೆ, ಸಾಧ್ಯವಾಗದು ನನಗೆ
 
ಮಾತ ಕೇಳಿದ ಮಂದಿ, ಕಳವಳವ ಹೊಂದಿ
ಸಂಶಯವತಳೆದರು ಅದೈತದಲ್ಲಿ
 
ಶ್ರೀ ಪೂರ್ಣ ಪ್ರಜ್ಞರ ಪಾಠ ಪ್ರವಚನ ವೈಖರಿ
ಪಾಮರ, ಪಂಡಿತ, ಯತಿವರ್ಗವೆಂದು
ಮುಮುಕ್ಷುಗಳಲುಂಟು ಹಲವಾರು ವರ್ಗಗಳು
ಪಾಮರಗೆ ಶ್ರವಣ, ವಿಬುಧರಿಗೆ ಪ್ರವಚನ
ಯತಿಗಳಿಗೆ ಮತ್ತಿಷ್ಟು ಅಧಿಕ ಸಾಧನೆ ಬೇಕು
ಜನವಿನಂತಿಗೆ ಮಣಿದು ಶ್ರೀ ಪೂರ್ಣಪ್ರಜ್ಞರು
ಮಿಥ್ಯವಾದದ ತತ್ವ ತಿಳಿಯ ಹೇಳಿದರು
 
68 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47