This page has not been fully proofread.

ಮಧ್ಯ ಸರೋವರ ಪ್ರಸಂಗ
 
ಗಂಗೆಯಲ್ಲಿ ಸ್ನಾನಕ್ಕೆ ಹೋಗಬಯಸಿದ ಶಿಷ್ಯ
 
ಗುರುವ ಅನುಮತಿಗಾಗಿ ಅಡಿಗಡಿಗೆ ನಮಿಸಿದನು
 
ಚಿಂತಿಸುತ ಕುಳಿತರು ಅಚ್ಯುತ ಪ್ರೇಕ್ಷರು
ಬರಲಿರುವ ದಿನಗಳಲ್ಲಿ ಶಿಷ್ಯವಿರಹದ ಬೇಗೆ
ಭರಿಸುವುದು ಹೇಗೆಂದು ಪರಿತಪಿಸಿ ಕುಳಿತರು
ಹರಿಯ ಮೊರೆ ಹೊಕ್ಕರು ಇದರ ಪರಿಹಾರಕ್ಕೆ
 
ಎಂದೆಂದೂ ಓಗೊಡುವ ಶ್ರೀ ಹರಿಯು ಮೊರೆಗೆ
ಆ ಕ್ಷಣವೆ ಒಬ್ಬನೊಳು ಆವಿಷ್ಟನಾಗಿ
ಆದೇಶವಿತ್ರನಾ ಕರುಣಾಳು ಹರಿಯು
"ಇಲ್ಲಿನಾ ಕೊಳದಲ್ಲಿ ನಾಳಿನಾಚೆಯ ದಿನದಿ,
ದೇವನದಿ ಗಂಗೆಯು ಬರಲಿಹಳು ಇಲ್ಲಿ
ತೆರಳದಿರಿ ನೀವಿನ್ನು ಗಂಗೆಯ ಸ್ನಾನಕ್ಕೆ"
 
ಭಗವದಾಣತಿಯಂತೆ ಬಂದಿಳಿದಳಾ ಗಂಗ
ದೇವಸನ್ನಿಧಿಯಲ್ಲಿ ಪ್ರವಹಿಸುತ ನಿಂದಳು
ಪೂರ್ಣಬೋಧರ ಹಿರಿಯ ಮುಂದಾಳುತನದಲ್ಲಿ
 
ಪುಳಕಗೊಂಡರು ಮಂದಿ ಜಳಕವಾಡುತಲಲ್ಲಿ
ಅವರಲ್ಲಿ ನೆಲೆಸಿರುವ ಶ್ರೀ ಹರಿಯ ಕೃಪೆಗಾಗಿ
ಹರಿಯುವಳು ಹನ್ನೆರಡು ವರ್ಷಗಳಿಗೊಮ್ಮೆ
 
ಶ್ರೀ ಪೂರ್ಣ ಪ್ರಜ್ಞ ವಿಜಯ
 
ಆಶ್ರಮವ ಸ್ವೀಕರಿಸಿ ನಾಲ್ವತ್ತು ದಿನವಾಯ್ತು
ಪೂರ್ಣಬೋಧರ ಕೀರ್ತಿ ಎಲ್ಲೆಡೆಯು ಹರಡಿತ್ತು
ಧಾವಿಸುತ ಬಂದರು ಪಂಡಿತೋತ್ತಮರೆಲ್ಲ
ತರ್ಕ ಮೀಮಾಂಸೆಗಳ ದಿಗ್ಗಜಗಳೆಲ್ಲ
ವಾಸುದೇವ ಎಂಬ ಖ್ಯಾತ ಪಂಡಿತ ಕೂಡ
ಸೋಲನನುಭವಿಸಿದನು ಶಾಸ್ತ್ರಾರ್ಥದಲ್ಲಿ
 
ನಾಲ್ಕನೆಯ ಸರ್ಗ/ 67
 
40
 
42
 
43