This page has not been fully proofread.

"ಪರಿಪರಿಯ ಶಾಸ್ತ್ರಗಳ ಬಲ್ಲವನು ನಾನು
ಅದರಿಂದ ಸಹಿಸಿಹನು ನಿನ್ನ ವಿರಹದ ನೋವ
ಸಹಿಸಲಾರಳು ಅದನು, ನಿನ್ನ ಹಡೆದವ್ವ"
 
ತಂದೆಯಾ ನುಡಿ ಕೇಳಿ ವಾಸುದೇವನು ಅಂದ
 
"ಆ ಮಾತು ಹಾಗಿರಲಿ, ನೀವಾದರೂ ನೀಡಿ ಅಪ್ಪಣೆಯನು"
 
ಎಂದೆನುತ ತಂದೆಯ ಚರಣಕರಗಿದನು
 
ಪರಮಜ್ಞಾನಿಗಳಾದ ಮಧ್ಯಗೇಹರು ಕೂಡ
ಸೋಲನನುಭವಿಸಿದರು ವಾಗ್ಯುದ್ದದಲ್ಲಿ
''ಹಡೆದವ್ವ ಒಪ್ಪಿದರೆ, ಇರದನ್ನ ಆಕ್ಷೇಪ'
ಎಂದು ನುಡಿಯುತ ಆ ಭೂಸುರೋತ್ತಮರು
ಮರಳಿದರು ಮತ್ತೊಮ್ಮೆ ಮನೆಯ ಕಡೆಗೆ
ಅರುಹಿದರು ನಿವಸತಿಗೆ ವಿಷದ ವಿಷಯವನು
 
ಭಾವೀ ವಿಷ್ಣುತೀರ್ಥರ ಅಮಾರ
 
ಶ್ರೀ ರಾಮಚಂದ್ರನಿಗೆ ಲಕ್ಷ್ಮಣನ ಪರಿಯಲ್ಲಿ
ಶ್ರೀ ಭೀಮಸೇನನಿಗೆ ಇಂದ್ರನಂದನನಂತೆ
ಕೃಷ್ಣ ಪರಮಾತ್ಮನಿಗೆ ಅನುಜ ಗದನಂತ
ವಾಸುದೇವಗೆ ತಮ್ಮ ಹುಟ್ಟಿಯೇ ಬಿಟ್ಟ
ಈ ಸೋದರನು ಅತ್ಯಂತ ಅಭಿಮಾನಶಾಲಿ
ಅಣ್ಣನಲಿ ವಿಶ್ವಾಸ, ಭಯಭಕ್ತಿ, ಆದರ
 
ಮಗನ ಸನ್ಯಾಸಕ್ಕೆ ಮಾತೆಯ ಮೌನ ಸಮ್ಮತಿ
 
ಪ್ರಲಯ ಕಾಲಾಂತ್ಯದಲೂ ನಾಶವಾಗದ ಜ್ಞಾನ !
ಇಂಥ ಜ್ಞಾನವ ಪಡೆದ ಆ ವಾಸುದೇವ,
ತನ್ನ ಮನೆಗೈತಂದು ಇಂತು ನುಡಿದ
 
"ಈ ಬಾಲಕನೆ ನಿಮ್ಮಯ ಪಾಲಕನು ಮುಂದೆ'
ಪತಿಯ ಆಣತಿಯಂತೆ ಸುತಗೆ ಸನ್ಯಾಸವನ್ನು
ಧಿಕ್ಕರಿಸಿ ನುಡಿದಿದ್ದ ಮಾತೆಗಿಂತೆಂದನು :
 
ನಾಲ್ಕನೆಯ ಸರ್ಗ/ 63
 
24
 
25
 
26
 
27