This page has not been fully proofread.

"ಮುಪ್ಪು ಬಂದಿಹುದೆಮಗೆ, ನಿನ್ನ ತಾಯ್ತಂದೆಗಳಿಗೆ
ನಾವಿಬ್ಬರೂ ಇನ್ನೂ ಜೀವಂತವಾಗಿದ್ದವು
ಸಲಹುವವರಾರಿಲ್ಲ ನಿನ್ನ ಹೊರಡು
ತರವಲ್ಲ ನೀನೀಗ ಸನ್ಯಾಸಿಯಾಗುವುದು
ಇತ ಸುತನೊಳು ಅವರು ಬಿನ್ನಪವಗೈದು
ನಿಜಸುತಗೆ ನಮಿಸಿದರು ಸುತ್ತುವರಿದು
 
ಕಿರುನಗೆಯ ಸೂಸುತ್ತ ವಾಸುದೇವನು ನುಡಿದ
"ಕಿರಿಯರಿಗೆ ಹಿರಿಯರು ನಮಿಸುವುದು ಸಲ್ಲ
ಯತಿಗಳಿಗೆ ಮಾತ್ರ ಅರ್ಹತೆಯು ಇದಕ
ಇದರಿಂದ ಸ್ಪುಟವಾಯ್ತು ಶ್ರೀ ಹರಿಯ ಇಚ್ಛೆ
ಆತನೇ ಕೊಡಿಸಿದನು ನಿಮ್ಮ ಅನುಮತಿಯ"
ಎಂತಹ ಅದ್ಭುತ! ಎಂಥ ಅಚ್ಚರಿಯು !
 
ಮಗನ ಮಾತಿಗೆ ಅವರು ಉತ್ತರಿಸದಾದ
ದರು
ವೀಕ್ಷೆಯನ್ನು ತ್ಯಜಿಸೆಂದು ಮಗನಲ್ಲಿ ಮೊರೆಯಿಡುತ
ಅಚ್ಯುತ ಪ್ರೇಕ್ಷರಿಗೆ ಮತ್ತೊಮ್ಮೆ ನಮಿಸುತ್ತ
ಸತಿಯೊಡನೆ ಮನೆಯೆಡೆಗೆ ಮತ್ತೆ ಮರಳಿದರು
ಮಗನ ಮುಖಚಂದ್ರಮನ ಹಗಲಿರುಳು ಸ್ಮರಿಸುತ್ತ
ಕಲದೋಪಾದಿಯಲ್ಲಿ ಕ್ಷಣಗಳನ್ನು ಕಳೆದರು
 
ಮಗನ ಮಾತಿಗೆ ತಲೆಬಾಗಿದ ತಂದೆ
 
ಮಗನ ಮನದಿಚ್ಚೆಯನ್ನು ಬದಲಿಸುವ ಯತ್ನದಲ್ಲಿ
 
ಮರಳಿ ತೆರಳಿದರವರು ಮಗನ ಬಳಗೆ
ನೇತ್ರಾವತಿ ನದಿಯ ಆಚೆಯ ಬದಿಗೆ
 
ಕಾರ್ಮೂರು ಎಂಬೊಂದು ಗ್ರಾಮವುಂಟು
ಆ ಗ್ರಾಮದಲ್ಲಿನ ಕುತ್ಯಾಡಿ ಮಠದಲ್ಲಿ
ಗುರುವ ಸೇವಿಸುತ್ತಿದ್ದ ಮಗನ ನೋಡಿದರು
 
ನಾಲ್ಕನೆಯ ಸರ್ಗ/ 61
 
16
 
17
 
18
 
19