This page has not been fully proofread.

ಮಾರು ಹೋದರು ಅವರು ಮಾಯಾವಾದಕ್ಕೆ
ಮರಳಿ ಪರಿತಪಿಸಿದರು ದುಷ್ಟಶಾಸ್ತ್ರ ಕುತರ್ಕಕ
ಪಾಪಗಳದೆಲ್ಲದರೂ ಪರಿತಾಪ ಪರಿಹಾರ
ಹಿಂದೊಮ್ಮೆ ಶ್ರೀ ಕೃಷ್ಣ ಚರಣಾರವಿಂದವನು
ಗಾಸಿಗೊಳಿಸಿದ ವ್ಯಾಧ ಬಾಣವೊಂದನ್ನು ಬಿಟ್ಟು
ನಂತರದ ಪರಿತಾಪ ಪಾಪ ಪರಿಹರಿಸಿತ್ತು
 
·
 
ಉಪನಿಷತ್ತುಗಳೆಲ್ಲ ಕರತಲಾಮಲಕ
ವಿನಯವೆಂಬುದು ಅವರ ರತ್ನದಾಭರಣ
ಹಗಲಿರುಳು ಎನ್ನದೆ ತತ್ವಚಿಂತನೆ ಚಿಂತ
ಇಂತು ಮರೆಯುತಲಿದ್ದ ಅಚ್ಯುತ ಪ್ರೇಕ್ಷರನ್ನು
ಮರಣ ಶಯ್ಕೆಯಲಿದ್ದ ಅವರ ಗುರುಗಳು ಒಮ್ಮೆ
 
ಏಕಾಂತದಲ್ಲಿ ಕರೆದು ಇಂತಂದು ಹೇಳಿದರು
 
''ನಾನೆ ಪರಬೊಮ್ಮ, ನನ್ನಿಂದ ಯಾವುದೂ ಬೇರೆ ಅಲ್ಲ'
ಎಂಬಂಥ ಮಾತೆಲ್ಲ ಅರ್ಥ ಶೂನ್ಯ
 
ಅಂಥ ಮಾತನು ನಂಬಿ ಮರುಳಾಗಬೇಡ
ಮಾಯಾವಾದದ ಸೂತ್ರ, ಧರ್ಮ ಬಾಹಿರ ಸೂತ್ರ
ಶಾಸ್ರೋಕ್ತ ಸಮ್ಮತಿ ಅದಕೆಂದೂ ಇಲ್ಲ
ಸುವ್ರತನೆ, ನೀನದನು ತ್ಯಜಿಸಿ ಹೊರಹಾಕು"
 
"ಆತ್ಮ" ವೆಂಬುದದು ಮಾಯಾವಾದದ ವಿಧಿಯು
 
ಹರಿಯ ಆರಾಧನೆಗೆ ಸರಿಯಾದ ವಿಧಿಯಹುದೆ ?
ಮಿಥ್ಯವಾದದ ತರ್ಕ, ತಥ್ಯವಿಲ್ಲದ ತರ್ಕ
 
ಎನಗಿರಲಿ, ಎನಗಿಂತ ಹಿರಿಯರಾದವರಿಗೂ
 
ಗುರುವ ಗುರುವಿನ ಗುರುವಿಗೂ ತಿಳಿಯಲಾರದ ತರ್ಕ
 
ನಂಬದಿರು ಇದನು, ಮುದದಿಂದ ಭಜಿಸು ಶ್ರೀ ಮುಕುಂದನನು
 
ನಾಲ್ಕನೆಯ ಸರ್ಗ/ 59
 
8
 
10
 
11