This page has not been fully proofread.

ಬ್ರಹ್ಮಚರ್ಯದ ಧರ್ಮ ನಿಷ್ಠೆಯಲ್ಲಿ ಪಾಲಿಸುತ
ಬ್ರಾಹ್ಮಣೋಚಿತ ಕರ್ಮ ಶ್ರದ್ಧೆಯಲ್ಲಿ ಮಾಡುತ್ತ
ಸುಬ್ರಹ್ಮಣ್ಯನ ತೆರದಿ ಕಂಗೊಳಿಸಿ ಮೆರೆದಿದ್ದ
ಸಂಧ್ಯಾದಿ ಕರ್ಮಗಳ ಎಂದೆಂದೂ ಬಿಡದಿದ್ದ
ಬಾಲವಟುವನು ಕಂಡ ನಡುಮನೆಯ ಭಟ್ಟ
 
ಮನದೊಳಗೆ ಸಂತಸದಿ ಮುದಗೊಂಡನು
 
ಸಕಲ ಲೋಕಕ ಒಡೆಯ ಶ್ರೀ ವಾಯುದೇವ
ಜನದ ಐಸಿರಿಗೆಲ್ಲ ಈತನೆ ಭಾಜನನು
ಇಂಥ ವೈಭವವನ್ನು ಮರೆಮಾಚಿಸುತ್ತ
ನಿರ್ಗತಿಕನಂತೊಂದು ಕೌಪೀನ ಧರಿಸುತ್ತ
ಎಲ್ಲೆಡೆಯು ಸಂಚರಿಪ ಸೋಜಿಗವ ಕಂಡು
ಅಚ್ಚರಿಯು ಮೂಡಿತ್ತು ದೇವವೃಂದದಿ ಅಂದು
 
ಕಾಲುಕಚ್ಚಿ ಕಾಲವಶನಾದ ಮಣಿಮಂತ
 
ಸರ್ಪರೂಪದ ಒಬ್ಬ ರಕ್ಕಸನು ಒಮ್ಮೆ
ದ್ವೇಷವೆಂಬುವ ದುಷ್ಟ ವಿಷದ ಜ್ವಾಲೆಗಳಿಂದ
ಸುತ್ತಮುತ್ತಲ ಜನರ ಅಂಜಿಸುತಲಿದ್ದ
ಮಣಿ ಮಂತನೆಂಬುವ ಈ ದುಷ್ಟ ರಾಕ್ಷಸನು
ಮನೆಯಿಂದ ಹೊರಬಿದ್ದು ಗಿರಿಯೆಡೆಗೆ ನಡೆದಿದ್ದ
ವಟು ವಾಸುದೇವನನು ಕಚ್ಚಿ ಕೊಲ್ಲಲು ಬಂದ
 
ವಿಷದ ದವಡೆಗೆ ಸಿಲುಕಿ ಹಸುಳೆ ಸಾಯಲಿ ಎಂದು
ಜೀವರಿಗೆ ಪ್ರಭುವಾದ ವಾಸುದೇವನ ಕಡೆಗೆ
ಹೆಡೆಯೆತ್ತಿ ತ್ವರೆಯಿಂದ ಧಾವಿಸಿದ ಅಸುರ
ಪ್ರಾಣದೇವನಿಗಾರು ಗಾಸಿ ಮಾಡಲು ಸಾಧ್ಯ ?
ವಾಸುದೇವನು ತನ್ನ ಕೆಂಪು ಕಾಲ್ಪೆರಳಿಂದ
ರಕ್ಕಸನ ತುಳಿತುಳಿದು ಪುಡಿಮಾಡಿ ಬಳಲಿಸಿದ
 
48 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39