This page has not been fully proofread.

ಶ್ರೀ ಹರಿಯ ಚರಣವನು ಸೇವಿಸಿದನವನು
ಪತ್ನಿ ಸಮೇತ, ಭಯಭಕ್ತಿ ಸಹಿತ
ಲಘುವಾಯಿತಿನ್ನಷ್ಟು ಅವನ ಭೋಗಗಳು
ನಿಗ್ರಹಿತ ಚಿತ್ರವನ್ನು ಮತ್ತಷ್ಟು ನಿಗ್ರಹಿಸಿ
ಪರಿಶುದ್ಧ ದೇಹವನು ಮತ್ತಷ್ಟು ಶುಚಿಗೊಳಿಸಿ
ಉತ್ತಮೋತ್ತಮವಾದ ಸೇವೆಯನ್ನು ಸಲ್ಲಿಸಿದನು
 
ಸಕಲ ಗುಣ ಸಂಪನ್ನ ನೆನ್ನಿಸುವ ಮಗುವನ್ನು
ಪಡೆಯಲಿಚ್ಚಿಸಿದ ಆ ದಂಪತಿಗಳಿಬ್ಬರೂ
ಪಯೋವ್ರತ ಮುಂತಾದ ವಿವಿಧ ವ್ರತಗಳನು
ಶ್ರದ್ಧೆಯಿಂ ನಡೆಸಿದರು ಅದಿತಿ ಕಶ್ಯಪರಂತೆ
ದೇವಾಧಿದೇವನನು ವಿವಿಧ ಪೂಜೆಗಳಿಂದ
 
ಸಂತೃಪ್ತಿಗೊಳಿಸಿದರು ಭಕ್ತಿ ನಿಷ್ಠೆಗಳಿಂದ
 
ಸಂತುಷ್ಟನಾದನು ಆ ಸ್ವಾಮಿ ಇದರಿಂದ
ಕರುಣಸುಧೆಯಿಂದವರ ಅಭಿಷೇಕ ಮಾಡಿದನು
 
ಸಿರಿದೇವಿ ಶ್ರೀರಮಣ ಸನ್ನಿಧಾನದಿ ಅವರ
ಬೆಳಗಿದರು ಅಪ್ರತಿಮ ದೇಹ ಕಾಂತಿಯೊಳು
 
ವಿಧವಿಧದ ಉಪವಾಸ ವ್ರತಗಳಿಂದಾಗಿ
ಮಿಗಿಲಾದ ಶುದ್ದಿಯೂ ಅವರದಾಯ್ತು
 
ಮಧ್ಯಗೇಹರ ಪತ್ನಿಗೆ ಗರ್ಭಾಂಕುರ
 
ಶುಕ್ಲ ಪಕ್ಷದೊಳೊಂದು ಪರಿಶುಭ ರಾತ್ರಿಯು
ಕತ್ತಲೆಯ ಕಿತ್ತೊಗೆವ ಚಂದ್ರಮನ ಪಡೆವಂತೆ
ಆಸೆ ಪಲ್ಲವಿಸಿದಾ ಮಧ್ಯಗೇಹರ ಪತ್ನಿ
ಶುಭ್ರವಸ್ತ್ರವ ಧರಿಸಿ, ಸೂಕ್ತ ಋತುಕಾಲದಲಿ
ಅಜ್ಞಾನ ತಿಮಿರವನು ಕಳೆವಂಥ ಗರ್ಭವನ್ನು
 
ಪತಿಯಿಂದ ಪಡೆದಳು ಜಗದ ಹಿತಕ್ಕಾಗಿ
 
26 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23