This page has not been fully proofread.

ಸೌಗಂಧಿಕಾ ಪುಷ್ಪವನು ತರುವಾಗ ಭೀಮ
ಮಣಿಮಂತ ಅಸುರನನು ಸಂಹರಿಸಿ ಹೋಗಿದ್ದ
ಅವನೀಗ ರುದ್ರನನು ಮೆಚ್ಚಿಸಿದವನಾಗಿ
ವಾಗ್ನಿಯಾಗುವೆನೆಂಬ ಬಯಕೆಯನ್ನು ತೋರಿದ್ದ
ಅಂಧ್ರತಲ ಮನೆತನದಿ ಮತ್ತೊಂದು ಹೆಸರಿಂದ
ಜನಿಸಿದನು ಮತ್ತಿತರ ರಾಕ್ಷಸರ ಕೂಡ
 
ಇಂತೊಂದು ಮಾರ್ಜಾಲ ಕಳ್ಳಮನಸನು ಹೊತ್ತು
ಸಾನ್ನಾಯ್ಯ ಎಂಬೊಂದು ಯಜ್ಞಭಾಗವ ಬಯಸಿದಂತೆ
ಅಸಾರ ವಸ್ತುವಿಗೆ ಆಸೆ ಪಡುವಾ ಶುನಕ
ಪುರೋಡಾಶವೆಂಬುವ ಹವ್ಯ ಬಯಸಿದಂತೆ
ಮತಿಹೀನ ಮಂಗವು ರತ್ನಕಾಶಿಸುವಂತೆ
ವೇದಾದಿಗಳಿಗೆ ಕೈಯಿಟ್ಟ ಆ ಧೂರ್ತ ಪಾಪಿ
 
"ಸನ್ಯಾಸಿಯಾಗದಿರೆ ಜನ ಮಣಿಯರೆನಗೆ"
ಹೀಗೆಂದು ಭಾವಿಸಿದ ಆ ದುಷ್ಟ ವಂಚಕನು
ಶೀಘ್ರದಲಿ ಸನ್ಯಾಸ ಸ್ವೀಕರಿಸಿ ಬಂದನು
ಇದರಿಂದ ಏನಾಯ್ತು ? ಓ ಭಕ್ತ ಜನರೇ !
ತಾವರೆಯ ಹೂವಿನ ತಿಳಿನೀರ ಕೆರೆಯಲ್ಲಿ
 
ಕೆಸರನೆಬ್ಬಿಸಬಂದ ದುಷ್ಟಗಜದಂತಾಯ್ತು
 
ಬೌದ್ಧ ಮತವೆಂಬೊಂದು ಮತವಿತ್ತು ಆಗ
ವೇದ ಪ್ರಾಮಾಣ್ಯವನದು ಉಪೇಕ್ಷಿಸಿತ್ತು
ಆ ಮತದ ಪಕ್ಷವನೇ ಹಿಡಿದಿದ್ದ ಆತ
ಆ ಮತವ ಬೆಂಬಲಿಪ ಯೋಜನೆಯ ಹೂಡಿದ್ದ
ದಕಾಗಿ ಅಂತಹ ಗ್ರಂಥಗಳ ರಚಿಸಿದ
ವೇದ ಸತ್ಯವನವನು ನಿರ್ಲಕ್ಷ್ಯದಲ್ಲಿ ಕಂಡ
 
ಮೊದಲನೆಯ ಸರ್ಗ / 15
 
47
 
48
 
49
 
50