This page has not been fully proofread.

ಅತ್ಯಧಿಕ ಭೋಗಗಳ ಲಾಲಸೆಯ ಹೊಂದಿದ್ದ
ಅಪ್ರತಿಮ ಶಕ್ತಿ, ಅರುಣಾಕ್ಷದಿಂದ
ಗಂಧಮಾದನದಲ್ಲಿ ಎಲ್ಲೆಲ್ಲೂ ಅಲೆದಿದ್ದ
ಎರಡು ನಾಲಗೆಯುಳ್ಳ ಮಣಿಮಂತನೆಂಬುವನ
ನಾಯಕತ್ವದೊಳಿದ್ದ ಕ್ರೋಧವರ ದೈತ್ಯರನು
ಸಂಹರಿಸಿದನಾ ಭೀಮ ಬಲು ಪರಾಕ್ರಮದಿ
 
ಬೂದಿಯಲ್ಲಿ ಮುಸುಕಿದ್ದ ಕೆಂಡದಾ ಉಂಡೆಗಳು
ತಂಗಾಳಿ ಬಂದಾಗ ಪ್ರಜ್ವಲಿಸುವಂತೆ
ಮಾರುತನ ನೆರವಿನಲಿ ಬಿದಿರುಮಳೆ ಸುಟ್ಟಂತ
ಗುಟ್ಟಾಗಿ ಅಡಗಿದ್ದ ಅಜ್ಞಾತ ಭೀಮನು
ಯಾರಿಗೂ ಸೋಲದ, ಎಲ್ಲರನು ಜಯಿಸಿದ್ದ
ಕೀಚಕರ ತಂಡವನ್ನು ಕಣದಲ್ಲಿ ಕೊಂದನು
 
ಶೋಭಿಸಿದನಾ ಭೀಮ ರಣರಂಗದಲ್ಲಿ
ಅಪ್ರತಿಮ ಆಯುಧಗಳ ಧರಿಸಿದವನು
ಎಂದಿಗೂ ಕೃಷ್ಣನಿಗೆ ಪ್ರಿಯನಾದ ಅವನು
ಶ್ರೀ ಕೃಷ್ಣ ತೋರಿದ ದಾರಿಯಲ್ಲಿ ನಡೆವವನು
ವೀರ ಪಾರ್ಥನ ಸಂಗ ರಣರಂಗದಲ್ಲಿ ನಿಂದು
ಭೀಷ್ಮ ದ್ರೋಣರ ಎದುರು ಜಯವ ಗಳಿಸಿದನು
 
ಧೃತರಾಷ್ಟ್ರ ಪುತ್ರರು ಅಪ್ರತಿಮ ವೀರರು
ಆದರವರೆಲ್ಲ ಧರ್ಮವನು ತೊರೆದವರು
ಬಂಧುಮಿತ್ರರನೆಲ್ಲ ಕಳೆದುಕೊಂಡವರು
ಕಡುತೀಕ್ಷ್ಯ ಕೋಪವನ್ನು ಪಡೆದುಕೊಂಡವರು
 
46
 
ಹಲವಾರು ತಿಯ ಆಯುಧಗಳಿಂದವರ
 
ಸಂಹರಿಸಿ ಶೋಭಿಸಿದ ಭೀಮಸೇನನು ಅಂದು
 
ಮೊದಲನೆಯ ಸರ್ಗ / 13
 
39
 
40
 
41
 
42