This page has not been fully proofread.

ರಜತಪೀಠಕ್ಕೆ ದೇವತೆಗಳ ಆಗಮನ
ಮಧ್ವಮುನಿಗಳ ದಿವ್ಯ ವಿಜಯದ ಉತ್ಸವವ
ಗೀರ್ವಾಣರೆಲ್ಲರೂ ಭಕ್ತಿಯಲ್ಲಿ ಪೂಜಿಸುತ
ಮಂದ ಹಾಸವ ತಳೆದು ವಿಸ್ಮಯದಿ ಕೂಡಿ
ಮುನಿ ನಿಕರ, ಗಂಧರ್ವರೆಲ್ಲರ ಸಹಿತ
ತೆರಳಿದರು ಬುವಿಯತ್ತ ಮಧ್ಯದರ್ಶನಕೆಂದು
ಆನಂದ ತೀರ್ಥರನು ನೋಡಲೆಂದು
 
"ಮಧ್ವಮುನಿ ರಚಿಸಿರುವ ಸಚ್ಛಾಸವೆಲ್ಲವೂ
ಶ್ರೀ ಹರಿಯ ಗುಣಗಳಿಗೆ ಹಿಡಿದಿರುವ ಕನ್ನಡಿ"
ಇಂತೆಂದು ಪಾಡುತ್ತ ಕೊಂಡಾಡಿ ಸ್ತುತಿಸುತ್ತ
ಅಪರಿಮಿತ ತೇಜದಲಿ ಗಗನವನು ಬೆಳಗುತ್ತ
ದೇವವೃಂದವು ಅಂದು ಧರೆಯತ್ತ ನೋಡುತ್ತ
ಆನಂದ ತೀರ್ಥರನು ಭಕ್ತಿಯಲ್ಲಿ ಕಂಡರು
 
ಭೂಭಾಗದಲ್ಲಿ ನೆಲೆಸಿ, ಆ ಮಧ್ವಮುನಿಗಳು
ಭುವನ ಭೂಷಿತರಾಗಿ ಜಗವ ಸಲಹಿರುವರು
ಹಲವು ಬಗೆ ಶಿಷ್ಯರಾ ಮಧ್ಯದಲ್ಲಿ ಕುಳಿತು
ಐತರೇಯದ ಮುಖ್ಯ ವ್ಯಾಖ್ಯಾನ ಮಾಡುತ್ತ
ಸಭೆಯಲ್ಲಿ ಬೆಳಗಿದಾ ಮಧ್ವರನು ಕಂಡು
ಗಗನದಲಿ ಆ ಸುರರು ಭಕ್ತಿಯಲ್ಲಿ ನಮಿಸಿದರು.
 
ಶ್ರೀಮಂತರವರು, ಶಶಿವದನ ಭೂಷಿತರು
ಕಮಲನೇತ್ರರು ಅವರು, ಗಂಭೀರ ಧ್ವನಿಯವರು
ಅತಿದಿವ್ಯ ಲಕ್ಷಣರು, ಸಂಪೂರ್ಣ ಕಾಮರು
ಸರ್ವರಿಗೂ ಗುರುವಾದ ಮಧ್ವರನು ಕಾಣುತ್ತ
ನಾವೆಲ್ಲ ಕೃತ ಕೃತ್ಯರೆಂದೆಣಿಸಿ ಆ ಸುರರು
ವಚನ ಪುಷ್ಪಗಳಿಂದ ಪೂಜಿಸಲು ತೊಡಗಿದರು
 
290 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
52
 
53
 
54
 
55