This page has not been fully proofread.

ಮಧ್ವಮುನಿಗಳ ಇಂಥ ಪಾಂಡಿತ್ಯ ಕಂಡು
ಶೋಭೆಯನು ತಾಳಿದ್ದ ಶತ್ರು ಪಂಗಡದವರು
"ನೀವು ಹೇಳಿದ ಅರ್ಥ ಸರಿಯಾದುದಲ್ಲ"
ಇಂತೆಂದು ನುಡಿಯುತ್ತ ಮಧ್ವರನು ಟೀಕಿಸಲು
"ಹಾಗಾದರಿದರರ್ಥ ನೀವೇ ಹೇಳಿ " ಎಂಬ
ಮಧ್ವರ ನುಡಿ ಕೇಳಿ ಓಟವನು ಕಿತ್ತರು
 
ಇಂತು ಓಡಿದ ಅವರು ಮತ್ತವರ ಬಳಿ ಬಂದು
ಖುಜ್ಜಂತ್ರಗಳ ಐದು ಪಾದ ಸಂಯೋಜನೆಯ
ಮಹಾನಾಮ್ನ ಋಕ್ಕುಗಳ ಅವಯವಗಳುಕ್ತವಾಗಿರುವ
ಬ್ರಾಹ್ಮಣದ ಅರ್ಥವನ್ನು ಹೇಳಿರೆಂದಂದಾಗ
ಆ ಋಕ್ಕುಗಳ ಅರ್ಥವನ್ನು ಕೂಡಲೇ ಮಧ್ವರು
ಶೃತಪಡಿಸಿ ತಕ್ಷಣವೇ ಲೇಖನವ ಬರೆಸಿದರು
 
"
 
ಆಚಾರ್ಯರ ಇನ್ನೂ ಕೆಲವು ಮಹಿಮೆಗಳು
 
ಸಂಪೂರ್ಣ ಉದಿಸಿದ ಪೂರ್ಣಚಂದ್ರನ ತೆರದಿ
 
ಬೆಳಗುವ ನಗೆಮೊಗದ ಮಧ್ವರನು ಕಂಡು
ತಾವೆಲ್ಲ ಅವರಿಗೆ ಪ್ರತಿವಾದಿ ಎಂದೆಣಿಸಿ
ದುಷ್ಟನಿಕರದ ಶ್ವಾನ ದೂರದಲ್ಲಿ ಬೊಗಳುತ್ತ
ಅವರಿಂದ ಮತ್ತೊಮ್ಮೆ ಸೋತು ಓಡಿದರು
ಅಮೃತಾಕರರಾದ ಮಧ್ವರಿಗೆ ಹಾನಿಯೆ ?
 
ಶ್ರೀ ಮಧ್ವಮುನಿಗಳು ಪರಮ ದಯಾ ಶೀಲರು
ಸಿರಿವಂತರಲ್ಲದ ಭಕ್ತಿಜನರರ್ಪಿಸಿದ
ಅನ್ನವನು ನಾಲ್ಕು ಮಡಿ ಹೆಚ್ಚಿಸುಣಿಸಿದರು
ಸಿರಿವಂತರು ತಂದ ತ್ರಿದಶ ಜನರುಣ್ಣುವ
ಅನ್ನವನು ಒಬ್ಬರೇ ಸುಲಭದಲ್ಲಿ ಭುಜಿಸುವರು
 
ಇದರಿಂದ ಎಲ್ಲರೂ ಸುಪ್ರೀತರಾಗುವರು
 
288 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47