This page has not been fully proofread.

ಸೋದರರು ಬಳಲುತ್ತ ಬಸವಳಿದು ಬೆವರಿದರು
ಕ್ರಮವಾಗಿ ಸಾಮರ್ಥ್ಯ ಉಡುಗುತ್ತ ಬಂದಿತು
ಗುರುಗಳಾಣತಿಯಂತೆ ಮಧ್ವ ಶಿಷ್ಯರಲ್ಲೊಬ್ಬ
 
ಬೀಸಣಿಕೆಯಿಂದವರ ಉಪಚರಿಸತೊಡಗಿದ
 
ಕಠಿಣತಮ ತ್ವಚೆಯುಳ್ಳ ಮಧ್ವರ ಕಂಠವನು
ಹಿಡಿದುಕೊಳ್ಳಲು ಸೋತು ಇಬ್ಬರೂ ಬಿದ್ದರು
 
ಗರ್ವವಿನ್ನೂ ಉಳಿದ ಆ ಸೋದರರು ಇಬ್ಬರೂ
ಶ್ರಮ ನಿವಾರಿಸಿಕೊಂಡು ಕುಳಿತ ಬಳಿಕ
ಮಧ್ವರಾ ಈರ್ವರಿಗೆ ಮತ್ತೊಂದು ವಿಧಿಸಿದರು
ನೆಲದಲ್ಲಿ ಊರಿರುವ ತಮ್ಮ ಅಂಗುಲಿಯನ್ನು
ಮೇಲೆತ್ತಬೇಕೆಂದು ಆಣತಿಯನಿತ್ತರು
ಅವರೆಷ್ಟು ತಿಣುಕಿದರೂ ಬೆರಳು ಅಲುಗಲೇ ಇಲ್ಲ
 
ವಟುವಿನ ಮೇಲೆ ಕುಳಿತು ಪ್ರದಕ್ಷಿಣೆ ಮಾಡಿದ್ದು
ಇಂತಹ ಬಲಶಾಲಿ ಆಚಾರ್ಯರೊಮ್ಮೆ
ವಟುವೊಬ್ಬನನು ಕರೆದು ಕಿರುನಗೆಯ ಸೂಸುತ್ತ
ಶ್ರಮವಾಗದಂತವನ ಹೆಗಲನೇರುತ್ತ
ನರಸಿಂಹ ಮಂದಿರವ ಸುತ್ತು ಹಾಕಿದರು
ಈ ಬಗೆಯ ಲಘಿಮಾದಿ ಐಸಿರಿಗಳಿಂದ
ತ್ರಿಭುವನದ ರತ್ನಗಳ ರಾಜನೆನಿಸಿದರು
 
ಪೂರ್ವವಾಟ ಪರಾಜಯ
 
ಪೂರ್ವ ವಾಟ ಎಂಬ ಮತ್ತೊಬ್ಬಬಲಶಾಲಿ
ಅರ್ಧ ಹ ರಾಜಭಟರೆ ತಂದಿರಿಸಿದ್ದ
ಏಣಿಯೊಂದನು ತಾನು ಒಬ್ಬನೇ ಹೊತ್ತಿದ್ದ
ಇಂತಹ ಬಲಶಾಲಿ, ದುಷ್ಟರಾಣತಿಯಂತೆ
ಮಧ್ವಮುನಿ ಪ್ರವಚನವ ತಡೆಹಿಡಿಯಲೆಂದು
ಅವರ ಗಂಟಲ ಹಿಡಿದು, ಅದುಮತೊಡಗಿದನು
 
284 / ಶ್ರೀ ಸುಮಧ್ಯ ವಿಜಯ ಕನ್ನಡ ಕಾವ್ಯ
 
28
 
29
 
30
 
31