This page has not been fully proofread.

ಮಧ್ವರಾಯರ ಮಹಿಮೆ ಇಂತು ಅಸದೃಶವಹುದು
ಇತರರಿಗೆ ಸಾಧ್ಯವೆ ಇಂಥ ಸಾಹಸವು ?
ಆದರೂ ದುರ್ಜನರು ಮಧ್ವರ ಬಗೆಗೆ
ಈರ್ಪೈಯನ್ನು ಸ್ಥಿರವಾಗಿ ತಳೆಯುತ್ತಲೇ ಇದ್ದರು
ಗುರುಗಳಲ್ಲಿ ದ್ವೇಷವನ್ನು ಸಾಧಿಸುತ್ತಲೇ ಇದ್ದರು
ಭಾಗ್ಯ ಹೀನರಿಗಿಂಥ ವರ್ತನೆಯು ಸಹಜ
 
ಗಂಡವಾಟ ಪರಾಜಯ
 
ಅಲ್ಪ ಸೇವೆಯನೀತ ಸಲ್ಲಿಸಲು ಬಂದಿಹನು
ಎಂಬಂಥ ನುಡಿಯಿಂದ ಅಲ್ಲಿನಾ ಕೆಲಜನರು
ಮಧ್ವರಾ ಶಕ್ತಿಯನ್ನು ಪರಿಕಿಸಲು ಬಯಸುತ್ತ
ಗಂಡವಾಟ ಎಂಬ ಮತ್ತೊಬ್ಬ ದುಷ್ಟನನು
ಸೋದರನ ಸಹಿತ ಎದುರಲ್ಲಿ ನಿಲ್ಲಿಸಿದರು
ಮಧ್ವರಾಗಳುಕದೆ ಬಲವ ತೋರೆಂದವಗೆ ಆದೇಶಿಸಿದರು
 
ಗಂಡವಾಟನು ತುಂಬ ಬಲಶಾಲಿಯಾದವನು
 
ಶ್ರೀ ಕಾಂತ ದೇಗುಲದ ಮೂವತ್ತು ಮಂದಿ
ಒಟ್ಟಾಗಿ ತಂದಿದ್ದ ಬಾವುಟದ ಕಂಬವನು
ಒಬ್ಬನೇ ಎತ್ತಿಟ್ಟು ಕಿರುನಗೆಯ ಬೀರಿದ್ದ
ಗದೆಯೊಂದನಪ್ಪಳಸಿ ತೆಂಗಿನ ಮರದಿಂದ
ಫಲಗಳನ್ನು ಉದುರಿಸಿ ಸೈ ಎನಿಸಿಕೊಂಡಿದ್ದ
 
ಇಂತಹ ಬಲಶಾಲಿ ಗಂಡವಾಟನು ಆಗ
 
ತನ್ನ ಜೊತೆಯಲ್ಲವನ ಅಣ್ಣನನ್ನೂ ಸೇರಿಸಿ
ಮಧ್ವರ ಕಂಠವನು ಬಲವಾಗಿ ಹಿಡಿದು
ಎಡೆಬಿಡದೆ ಅದುಮುತ್ತ ಸಾಹಸವಗೈದರು
ಆದರವರಾ ಯತ್ನ ಅತಿ ವಿಫಲವಾಯ್ತು
ಮಧ್ವರಾ ಕಂಠವು ಮತ್ತಷ್ಟು ಬಲವಾಯ್ತು
 
ಹದಿನಾರನೆಯ ಸರ್ಗ / 283
 
24
 
25
 
26
 
27