This page has not been fully proofread.

ಸಾಗರದ ತೆರೆಗಳು ಅತ್ಯಂತ ಪ್ರಬಲ
ಸಾಮಾನ್ಯ ಜನರಿಗದು ಎದುರಿಸಲಸಾಧ್ಯ
ಈ ತರಂಗಗಳೆಲ್ಲ ಮಂದಿಯನು ಅಪ್ಪಳಿಸಿ
ಕರಿನಿಕರ ಧಾಳಿಗೆ ತುತ್ತಾದ ತೆರದಲ್ಲಿ
ಆಕ್ರಾಂತರಾಗಿದ್ದ ಭಯ ಭೀತ ಜನರನ್ನು
ಅಪಹಾಸ್ಯ ಮಾಡಿದರು ಇತರ ಜನರೆಲ್ಲ
 
ಅಲ್ಲಿದ್ದ ದುರ್ಜನಕೆ ಇದು ಮೋಜ ನೀಡಿತು
ಮಜ್ಜನದ ಸಮಯದಲ್ಲಿ ಸಾಗರ ತರಂಗಗಳು
ಆವರಿಸಿದಾ ಮಧ್ವಮುನಿಗಳನ್ನು ಕಂಡು
ಲೋಕ ಪೂಜಿತರೆಂಬ ಈ ಪರಮ ಗುರುಗಳು
ಸಾಗರದ ತೆರೆಗಳಿಗೆ ತತ್ತರಿಸಿ ಹೋಗಿಹರು
ಇಂತೆಂದು ದುರ್ಜನರು ಪರಿಹಾಸ್ಯ ಮಾಡಿದರು
 
ಇಂತಹ ಮಾತುಗಳು ಸಾಮಾನ್ಯ ಮಂದಿಗೆ
ಮನಕೆ ಅತಿಯಾದ ಶೋಭೆಯನು ನೀಡುವುದು
ಆದರಾ ಮಧ್ವಮುನಿ ಪರಿಪೂರ್ಣ ಪ್ರಜ್ಞರು
ನೀಚರಾ ನುಡಿಯನ್ನು ಗಮನಿಸಲೇ ಇಲ್ಲ
 
ನರಿ ಊಳುವಿಕೆಗಳಿಗೆ ನಾಯಿ ಬೆದರುವುದು
ಸಿಂಹಕ್ಕೆ ಲವಲೇಶ ಕ್ಷೇಶ ಇದರಿಂದಿಲ್ಲ
 
ಸಮುದ್ರ ತಟಾಕದತಾಯಿತು
 
ಮಧ್ವಮುನಿಗಳ ನೋಟ ಪರಮ ಪಾವನವಹುದು
ಸಕಲ ಲೋಕಕೆ ಜನ್ಮ, ಸ್ಥಿತಿ, ಲಯವ ನೀಡುವುದು
ಅಂಬುಧಿಯ ಕಡೆಗವರು ಕುಡಿನೋಟ ಬೀರಿದರು
ಆ ಕಟಾಕ್ಷವು ಆಗ ದಿವ್ಯತೆಯ ಪಡೆಯಿತು
ಇದರಿಂದ ಸಾಗರವು ಚಲನೆಯನೇ ತೊರೆದು
ಪ್ರಕ್ಷುಬ್ಧವಾಗಿರದ ಪುಷ್ಕರಣಿಯಂತಾಯ್ತು
 
282 / ಶ್ರೀ ಸುಮಧ್ಯ ವಿಜಯ ಕನ್ನಡ ಕಾವ್ಯ
 
20
 
21
 
22
 
23