This page has not been fully proofread.

ಅಂಬುಧಿಯ ದೃತಗತಿಯ ಅಲೆಗಳೆಂಬುವ ಹಸ್ತ
ತೊಳೆದಿಹವು ತಟವನ್ನು ಅತಿ ಸ್ವಚ್ಛವಾಗಿ
 
ಇಂತಹ ತಟವೆಂಬ ಆಸನದ ಮೇಲೆ
ಆನಂದ ತೀರ್ಥರು ಆಸೀನರಾಗಿ
ಐತರೇಯದ ಸೂಕ್ತ ಅತಿ ರಮ್ಯವಾಗಿ
ವ್ಯಾಖ್ಯಾನ ಮಾಡಿದರು ಅತಿ ದೀರ್ಘವಾಗಿ
 
ಗಾಂಭೀರ್ಯ ಪಡೆದಿರುವ ಇವರ ಈ ಧ್ವನಿಯು
ಸಿಂಧುವಿನ ದನಿಯನ್ನು ಮೀರಿಸುತ್ತಿಹುದು!
ಸುಶ್ರಾವ್ಯವೀ ದನಿಯು, ಅತಿ ಮಧುರವಹುದು
ಪೂರ್ಣಚಂದ್ರನ ಕಾಂತಿ ಮೊಗವುಳ್ಳ ರೀತಿ
ಯಾರೆಂದು ತವಕಿಸುತ, ಅಚ್ಚರಿಯ ಸೂಸುತ್ತ
ಜನಜಲಧಿ ಅವರೆಡೆಗೆ ತ್ವರೆಯಿಂದ ಧಾವಿಸಿತು
 
ಮಧ್ವಮುನಿಗಳ ವೇದ ವ್ಯಾಖ್ಯಾನವನ್ನು
ಅಚ್ಚರಿಯೊಳಾಲಿಸುತ ಕೈಜೋಡಿಸುತ್ತ
ಮಧ್ವರಿಗೆ ವಂದಿಸುತ ಬಳಿಕ ಇಂತಂದರು
"ವೇದ ಭಾವವನುಚಿತ ರೀತಿಯಲ್ಲಿ ತಿಳಿಸುವ
ಮಧ್ವರನು ದುರ್ಜನರು ಶೃತಿವೈರಿ ಎನುವರು
ಧಿಕ್ಕಾರ, ಧಿಕ್ಕಾರ ಇಂತಹ ಜನಕೆ "
 
ಆನಂದ ತೀರ್ಥರಿಗೆ ಆ ವಿಪ್ರವೃಂದವು
ಭಕ್ತಿಯಿಂದಲಿ ತಮ್ಮ ಗೌರವವ ತೋರಿಸುತ
ಅವರ ಪದಧೂಳಿಯನು ಶಿರದಲ್ಲಿ ಧರಿಸಿತು
ಆನಂದ ತೀರ್ಥರ ಮಜ್ಜನದ ಪರಿಣಾಮ
ಅಧಿಕತಮ ಪಾವಿತ್ರ್ಯ ಹೊಂದದ ಸಾಗರದಿ
 
ವಿಹಿತ ಕಾಲದಿ ಮಂದಿ ಮುದಗೊಂಡು ಮಿಂದರು
 
ಹದಿನಾರನಯ ಸರ್ಗ /281
 
16
 
17
 
18
 
19