This page has not been fully proofread.

ಪರಿವಾರ ಸಹಿತ ಬಂದರಾ ಮಧ್ವರು
ಅವರನ್ನು ಕಾಣುತ್ತ ಸಜ್ಜನರು ಎಲ್ಲ
ಮಂದಹಾಸದ ಮೊಗದ ಫುಲ್ಲಾಕ್ಷರಾದರು
ದುರ್ಜನರು ದುರ್ಮುಖದ ಬಿಗುಮಾನ ಬೀರುತ್ತ
ಆನಂದ ತೀರ್ಥರನು ನಿಂದಿಸಲು ತೊಡಗಿದರು
ಅವರವರ ಭಾವಕ್ಕೆ ತಕ್ಕಂಥ ವರ್ತನೆ!
 
"ವಿಶ್ವಗುರು ಮಧ್ವರನು ನಿಂದಿಪುದು ಸಲ್ಲ"
ಎಂದು ಧಿಕ್ಕರಿಸುತ್ತ ದುರ್ಜನಕೆ ಶಿಕ್ಷೆಯನು
ಈಯಲೋಸುಗವೋ ಎಂದು
 
ಘನ ಘೋಷದ ಘೋರ ವೇಷದಲಿ ನಿಂದು
ಸಂಶೋಭೆ, ಸಂರಂಭ, ಸಂತಾಪ ತೋರಿಸುತ
ಖಲದಮನನಂತೆ ಆ ಸಿಂಧುರಾಜನು ಬಂದ
 
ಅಮಿತ ಸಮ್ಮೇದದಲಿ ಚಂಚಲವು ಆ ಸಿಂಧು
ದೃತಗತಿಯ ಚಲನೆಯಲಿ ಗಂಭೀರ ದನಿಯಲ್ಲಿ
ಸ್ತುತಿಸಿ ಪಾಡುವ ಮಧುರ ಇಂಚರದ ತೆರದಲ್ಲಿ
ನೊರೆಯೆಂಬ ತಿಳಿನಗೆಯ ಮೃದುಮಧುರ ಲಾಸ್ಯದಲಿ
ತೆರೆಗಳೆಂಬುವ ತನ್ನ ಅದಯವಗಳಿಂದಲಿ
ಮಧ್ವರಿಗೆ ನಮಿಸುವ ಮಯಲ್ಲಿ ತೋರಿತ್ತು
 
ಸಿಂಧುರಾಜನ ಜೊತೆಗೆ ಆನಂದ ತೀರ್ಥರು
ಗಾಂಭೀರ್ಯ, ವಾಕ್ಯು, ಜಲಲೀಲೆಯಂತಹ
ವಿವಿಧ ಗುಣರತ್ನಗಳ ಒಡೆಯರು ತಾವಾಗಿ
ಈರ್ವರಾ ಒಡನಾಟ ಅತಿಯಾಗಿ ಶೋಭಿಸಿತು
ಮಧ್ವರಾ ಲಾವಣ್ಯ ಜನಕೆ ಅತಿ ಪ್ರಿಯವಹುದು
ಜಲಧಿಯ ಲವಣತ್ವ, ಜನಕೆ ಓಕರಿಕೆ !
 
280 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15