This page has not been fully proofread.

ಶ್ರೀ ಗುರುಭೋ ನಮ:
 
ಹದಿನಾರನೆಯ ಸರ್ಗ
 
ಮತ್ತೊಬ್ಬ ಮಧ್ಯಶಿಷ್ಯರಿಂದ ಮಹಿಮಾ ವರ್ಣನ
ಇಂತಿರಲು ಒಮ್ಮೆ ಮಧ್ವಮುನಿ ಶಿಷ್ಯನು
ಮಧುಮಥನ ಅಂಫ್ರಿಯಲ್ಲಿ ಭಕ್ತಿಯನ್ನು ಹೊಂದಿದ್ದ
ವೇದ ಪಾಠಕರಾದ ಸಜ್ಜನರ ವೃಂದಕ್ಕೆ
 
ಆನಂದ ತೀರ್ಥರ ಅತಿಶಯದ ಮಹಿಮೆಯನು
ಬಂಧಗಳ ಬಿಡಿಸುವ, ಮೋಕ್ಷವನು ಕರುಣಿಸುವ
ವೇದಾಂತ ಶಾಸ್ತ್ರವೋ ಎಂಬಂತೆ ನುಡಿದನು
 
ಗೋಮತೀ ತೀರದಲ್ಲಿ ವೇದ ಪ್ರಾಮಾಣ್ಯ ಸ್ಥಾಪನೆ
 
ಶೃತಿಗಳನು ದ್ವೇಷಿಸುವ ವಾಚಾಲನೊಬ್ಬನು
ಗೋಮತೀ ತೀರದ ಬಳಿಯಲ್ಲಿ ಇದ್ದವನು
ಅಂತ್ಯ ವರ್ಣಜನಾದ ಕ್ಷಿತಿಪತಿಯು ಅವನು
ಕೀರ್ತಿಯೆಂಬುವ ಧವಳ ಚಂದ್ರನನ್ನು ಪಡೆದಿದ್ದ
ಶೃತಿಗುಣದ ಸಾಧಕರೂ ಕುಶಲ ವಾಗ್ನಿಗಳೂ ಆದ
ಆನಂದ ತೀರ್ಥರನು ಕುರಿತು ಇಂತೆಂದನು
 
"ವೇದವಾಕ್ಯಗಳುಂಟು ಸಾವಿರದ ನೂರಾರು
ವಾಕ್ಯವೊಂದರ ಫಲವು ಸಿದ್ಧಿಸದೆ ಹೋದರೂ
ಸಟೆಯಾಗುವುದು ಅದು ಮಾತಿನಂತೆ
ಸಕಲ ಶೃತಿವಚನಗಳ ಪ್ರಾಮಾಣ್ಯ ದೋಷಕ್ಕೆ
ಇಂತಹ ವಚನಗಳು ದೃಷ್ಟಾಂತವಾಗುವುವು
ಎಂಬಂಥ ಮಾತುಗಳ ಆತ ನುಡಿಯುತಲಿರಲು
 
1
 
2
 
3