This page has not been fully proofread.

ಶ್ರೀ ಮಧ್ವ ಶಿಷ್ಯರ ಮಹಿಮೆ
 
ಆನಂದ ತೀರ್ಥರ ವದನೇಂದು ಬಿಂಬವು
ಭಕ್ತರ ಭವ ತಾಪ ಪರಿಹರಿಸ ಬಲ್ಲದು
ವಿದ್ಯೆಯೆಂಬುವ ಸುಧೆಯ ಕಾಂತಿಯನ್ನು ಹೊಂದಿಹುದು
 
ನಿರ್ದುಷ್ಟ ಕಾಂತಿಯಲ್ಲಿ ಬೆಳಕ ಚೆಲ್ಲುತಲಿಹುದು
ಯಾವ ಭಕ್ತರು ಇಂಥ ಮೊಗವ ಕಂಡಿಹರೋ
ಅಂಥವರ ದಾಸತ್ವ ಕೊಡದಿಹುದೆ ಇಷ್ಟಗಳ ?
 
141
 
ಎಂಬಲ್ಲಿಗೆ ಶ್ರೀಮವಿಕುಲತಿಲಕ ಶ್ರೀವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀಮನ್ನಾರಾಯಣ ಪಂಡಿತ ವಿರಚಿತ ಶ್ರೀ ಸುಮಧ್ವ ವಿಜಯ ಮಹಾಕಾವ್ಯದ
ಆನಂದಾಂಕಿತ ಹದಿನೈದನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ.
 
ಹದಿನೈದನೆಯ ಸರ್ಗ / 273