This page has not been fully proofread.

ಮದಿಸಿದ ದುರ್ವಾದಿ ಮಾತಂಗ ನಿವಹದ
 
ಯುಕ್ತಿ ಎಂಬುವ ಕುಂಭ ಸ್ಥಳಗಳನ್ನು ಸೀಳುವ
ಕೇಸರಿಯ ತೆರದಲ್ಲಿ ಆ ಪದ್ಮನಾಭರು
ವೇದಾಂತ ತತ್ವವನು ಎಲ್ಲೆಲ್ಲೂ ಹರಡಿದರು
 
ಮಧ್ವರಾ ಕೃತಿರತ್ನ ಅನುವ್ಯಾಖ್ಯಾನಕೆ
ಜ್ಞಾನಸಾಗರರಾದ ಶ್ರೀ ಪದ್ಮನಾಭರು
ಸಾಯ ರತ್ನಾವಲಿ ಎಂಬ ಟೀಕೆಯನ್ನು ಬರೆದು
ಬೆಲೆಯಿರದ ರತ್ನಗಳ ಮಾಲೆಯನು ರಚಿಸಿದರು
 
ವೇದಾದಿ ಪ್ರವಚನಕೆ ಆಚಾರ್ಯರಾಗಿರುವ
ಗುರು ಮಧ್ವರ ಶಿಷ್ಯರಗ್ರಣಿಯು ಇವರೆಂದು
ಎಲ್ಲೆಲ್ಲೂ ಮಾನ್ಯರು ಶ್ರೀ ಪದ್ಮನಾಭರು
ವೇದ ವ್ಯಾಖ್ಯಾನವನ್ನು ಸಭೆಗಳಲ್ಲಿ ಮಾಡಿದರು
 
L
 
ಶ್ರೀಮದಾಚಾರ್ಯರ ಇತರ ಸನ್ಯಾಸಿ ಶಿಷ್ಯರು
ಈ ಈರ್ವ ಶಿಷ್ಯಕುಲಮಣಿಗಳಲ್ಲದೆ
ಆನಂದ ತೀರ್ಥರ ದಿವ್ಯ ಸನ್ನಿಧಿಯಲ್ಲಿ
ನಾನಾಪ್ರದೇಶಗಳ ನೂರಾರು ಯತಿಗಳು
 
ಈರ್ವರ ಬಳಿಕವೂ, ಮತ್ತವರ ಮುನ್ನವೂ ಶಿಷ್ಯತ್ವ ವಹಿಸಿದರು
 
ಅವರಲ್ಲಿ ಹಲವರು ಇಂದ್ರಿಯವ ಗೆಲಿದವರು
 
ಇನ್ನಷ್ಟು ಕೆಲವರು ಜನನ ಮರಣವ ಜಯಿಸಿದವರು
ನರಸಿಂಹನ ಪಾದದಾಶ್ರಿತರು ಕೆಲರು
ಹರಿನಾಮ ಹಾಡಿದ ಭಕ್ತರು ಕೆಲವರು
 
ದೀರ್ಘವಲ್ಲದ ಹೆಸರನುಳ್ಳವರು ಕೆಲರು
ಶ್ರೀ ರಾಮ ಪಾದಗಳ ರಕ್ಷಿತರು ಕೆಲರು
ಉತ್ಕೃಷ್ಟರಪ್ರತ್ಯಕ್ಷ ಗುಣದಿಂದ ಕೆಲರು
ಎಲ್ಲರೂ ವೈರಾಗ್ಯ ಭಕ್ತಿ ಸಾಗರರು
 
270 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
124
 
125
 
126
 
127
 
128
 
129