This page has not been fully proofread.

ವಿಷ್ಣುತೀರ್ಥರ ಧ್ಯಾನ ಅದ್ಭುತದ ಪರಿಯದು
ಕಾಮ ಮಣಿ ದೋಷವನ್ನು ಹೊಂದಿರದ ಧ್ಯಾನವದು
ಅಪರೋಕ್ಷಜ್ಞಾನದ ಬೆಳಕ ಪಡೆದಿಹ ಧ್ಯಾನ
ಕೈವಲ್ಯ ಸಾಮ್ರಾಜ್ಯ ಅದಕೆ ಮೌಲ್ಯ
 
ಮಧ್ವನಾಥನು ಆಗ ಮಧ್ವರಾ ಅನುಜರಿಗೆ
ಕರುಣಿಸಿದ ಕೃಪೆಯು ಮನಕೆ ಗೋಚರಿಸದು
ಅತಿಯಾದ ಗೋಪ್ಯತೆಯ ಹೊಂದಿರುವ ಕರುಣೆಯನು
ವರ್ಣಿಸಲಸಾದ್ಯವು ಈ ಕಥನದಲ್ಲಿ
 
ಪೂರ್ಣಬೋಧರ ಸೇವೆ ಮಹಿಮೆಯಲ್ಲಿ ಕೂಡಿಹುದು
ಆದರಿಂದಲೇ ಅನುಜರಿಗೆ ಇಂತಹ ಸಿದ್ದಿ
 
ಇಂತೆಂದು ಮಧ್ವಮುನಿ ಸೇವೆಯ ಮಹಿಮೆಯದು
ಮಾನ್ಯವಾಯಿತು ಜೀವ ದೇವಾದಿ ಗಣದಲ್ಲಿ
 
ಕಠಿಣತಮ ವ್ರತಗಳಲ್ಲಿ ನಿಷ್ಠೆಯಿಂದಿದ್ದಿಹ
ಅತೀಂದ್ರಿಯ ಜ್ಞಾನದಲ್ಲಿ ನೈಪುಣ್ಯ ಪಡೆದಿದ್ದ
ವಿದ್ಯಾಸಮುದ್ರರೂ, ತರ್ಕಕೋವಿದರಾದ
ಅನಿರುದ್ಧ ತೀರ್ಥರು ಐತಂದರಲ್ಲಾಗ
 
ಅವರ ಪ್ರಾರ್ಥನೆಯಿಂದ ಸಂಪ್ರೀತಗೊಂಡು
ರೂಪ್ಯಾಪೀಠಾಪುರಕೆ ವಿಷ್ಣುತೀರ್ಥರು ಅಂದು
ಮರಳಿದುದ ಕಂಡ ಶಿಷ್ಯಗಣವೆಲ್ಲವೂ
"ಮಧ್ವಮುನಿ ಇವರೇ" ಎಂಬ ಭ್ರಮೆಯನ್ನು ಹೊಂದಿದರು
 
ಕವಿಕುಲಾಗ್ರಣಿಗಳೂ, ಪಂಡಿತಶ್ರೇಷ್ಠರೂ
 
ಮಧ್ವಮುನಿ ಕೇಲಿಗಳ ಗಿಳಿಯ ಪರಿಯಲ್ಲೂ ಇದ್ದ
ತಾಪಸಾಗ್ರಣಿಯಾದ ಬಾದರಾಯಣರೆಂಬ
 
ಮತ್ತೊಬ್ಬ ಶಿಷ್ಯರೂ ವಿಷ್ಣುತೀರ್ಥರಿಗಿದ್ದರು
 
268 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
112
 
113
 
114
 
115
 
116
 
117