This page has not been fully proofread.

ಗುರುಕೃಪೆಯ ಅಂಕುರವ ತ್ವರಿತದಲ್ಲಿ ಗಳಿಸಿ
ಶ್ರೀ ವಿಷ್ಣುತೀರ್ಥರು ಇಂದ್ರಿಯಗಳ ನಿಗ್ರಹ,
ಹರಿಗುರುವ ಭಕ್ತಿ, ಮಾಧುರ್ಯ, ಪರಿಚರ್ಯ
ಮುಂತಾದ ಸಾಧನದಿ ಹೆಮ್ಮರವ ಮಾಡಿದರು
 
ಆನಂದ ತೀರ್ಥರ ಕಾರುಣ್ಯ ವೆಂಬುವ
ಕಲ್ಪವೃಕ್ಷದ ಕೆಳಗೆ ಆಶ್ರಮವ ಪಡೆದ
ವಿಷ್ಣುತೀರ್ಥರ ಮಹಿಮೆ ಬಣ್ಣಿಸಲಸದಳವು
ಆದರೂ ಬಣ್ಣಿಪೆವು ಶಾನುಸಾರ
 
ಶ್ರೀ ವಿಷ್ಣುತೀರ್ಥರು ಪ್ರವಚನದಿ ಚತುರರು
ಪ್ರಣವಾದಿ ಮಂತ್ರದಲ್ಲಿ ಅತ್ಯಂತ ಕುಶಲರು
"ಮಧ್ವಮುನಿ ದಾಸರಲಿ ಪ್ರಪ್ರಥಮ ನಾನು'
ಅಂತಾಗಬೇಕೆಂದು ಅವರು ನಿಶ್ಚಿಸಿದರು
 
ಬಡಗ ದಿಕ್ಕಿಗೆ ಅವರು ತೀರ್ಥಯಾತ್ರೆಗೆ ಹೊರಟು
ಹಲವಾರು ತೀರ್ಥದಲ್ಲಿ ಮಜ್ಜನವಗೈದರು
ತೀರ್ಥಗಳ ಜಲದಿಂದ ಪೂತರಾದರು ಅವರು
ಅವರ ಸಂಪರ್ಕದಲ್ಲಿ ತೀರ್ಥ ಪಾವನವಾಯ್ತು
 
ಕಾಮ್ಯಕರ್ಮವ ತೊರೆದು ತಪವಗೈಯುವ ಜನಕೆ
ಸಾಧನೆಯ ಸ್ಥಳವೆಂದು ಖ್ಯಾತಗೊಂಡಂತಹ
ಹರಿಶ್ಚಂದ್ರವೆಂಬುವ ಪರ್ವತದ ಪ್ರಾಂತಕ್ಕೆ
ಐತಂದರವರು ಅದೃಶ್ಯರಾಗಿ
 
ಮಾತ್ಸರ್ಯ ರಹಿತರು, ಶ್ರೀ ವಿಷ್ಣುತೀರ್ಥರು
ಶೀತ, ಉಷ್ಣಗಳೆಂಬ ದ್ವಂದ್ವದಲ್ಲಿ ಜನಿಸುವ
ದುಃಖವೆಂಬಗ್ನಿಯಲ್ಲಿ ದ್ವೇಷವನು ತಳೆಯುತ್ತ
ಅದಕೆ ಇಂಧನವಾದ ಅಶನವನು ತ್ಯಜಿಸಿದರು
 
266 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
100
 
101
 
102
 
103
 
104
 
105