This page has not been fully proofread.

ಬಲು ಚತುರರು ನಮ್ಮ ಆನಂದ ತೀರ್ಥರು
ನಾಲ್ಕು ಜನ ಶಿಷ್ಯರನು ಒಂದೆಡೆಯೇ ಕುಳ್ಳಿರಿಸಿ
ನಾಲ್ಕು ಅಧ್ಯಾಯಗಳ ಅನುಭಾಷ್ಯವನ್ನು
ಒಮ್ಮೆಗೇ ಬರೆಸಿದರು ಸುಲಲಿತವಾಗಿ
 
ನ್ಯಾಯ ವಿವರಣ ರಚನೆ
 
ತಮ್ಮ ಈ ಗ್ರಂಥದಲಿ ಉಪಪನ್ನವಾದ
ಯುಕ್ತಿ ಮಾಲಾ ಎಂಬ ಭಾಗಕ್ಕೆ ಮಧ್ವರು
ಸಿದ್ಧಾಂತ ಯುಕ್ತಿಗಳ ವಿವರಣೆಯ ಸಲುವಾಗಿ
ನ್ಯಾಯವಿವರಣ ವೆಂಬ ಗ್ರಂಥವನ್ನು ರಚಿಸಿದರು
 
ಶ್ರೀ ವಿಷ್ಣುತೀರ್ಥರ ಮಹಿಮಾ ವರ್ಣನೆ
 
ಮಧ್ವಂದುವಿನ ನಿತ್ಯ ಸಂಬಂಧದಿಂದ
ಅಜ್ಞಾನ, ತಾಪಗಳ ಬಂಧನವ ತೊರೆಯುತ್ತ
ವೈಕುಂಠ ಯಾತ್ರೆಯನ್ನು ತಾಯ್ತಂದೆ ಮಾಡಿದರು
ಮಧ್ವರನುಜರು ಆಗ ಪಾಜಕದಿ ಉಳಿದರು
 
ವಿಧಿಯ ಭೂಲಾಸ್ಯದಲಿ ಆ ಮಧ್ವರನುಜರು
ಧನ, ಧಾನ್ಯ ಗೋವುಗಳು ನಾಶವಾದುದ ಕಂಡು
ವೈರಾಗ್ಯ ಭಾವವನು ಕೂಡಲೇ ತಳೆದು
ವೇದವ್ಯಾಖ್ಯೆಯ ನಿಪುಣ ಅಗ್ರಜನ ಕಂಡರು
 
ಅಡಿಗಡಿಗೆ ಅಗ್ರಜರ ಅಡಿಗಳಿಗೆ ಎರಗುತ್ತ
ಸನ್ಯಾಸವನ್ನೆಮಗೆ ನೀಡಿರೆಂದನ್ನುತ್ತ
ಬಿನ್ನಹವ ಮಾಡಿದ ಅನುಜನಿಗೆ ಮಧ್ವರು
ಕಾಲಸನ್ನಿಹಿತವಾಗಿಲ್ಲವೆಂದೆನ್ನುತ್ತ ಕಳುಹಿದರು ಆತನನು ಪಾಜಕಕ್ಕೆ
 
264 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
89
 
90
 
91
 
92
 
93