This page has not been fully proofread.

"ಯಮಕ ಭಾರತವೊಂದು ವಿಶ್ವವಿಸ್ಮಯ ರಚನೆ !
ಭಾರತದ ಗೌಪ್ಯದ ಅರ್ಥ ಸಂಗ್ರಹ ರೂಪ !
ಕಾವ್ಯ ಸಾಮರ್ಥ್ಯವನು ಜಗಕೆ ತೋರಿಸಲೆಂದು
ಓ ಮಧ್ವಮುನಿಗಳೇ ! ರಚಿಸಿಹಿರಿ ಈ ಕಾವ್ಯ"
 
"ರತ್ನದಾಕರವಾದ ಜ್ಞಾನಸಾಗರ ನೀವು !
ಸಾಗರದ ಗರ್ಭದಲ್ಲಿ ಅಡಗಿರುವ ರತ್ನಗಳ
ವಿಧ ವಿಧದ ಸ್ತೋತ್ರಗಳ, ಜಾಣ್ಣುಡಿಯ, ಗಾಥೆಗಳ
ಅಮೂಲ್ಯ ತುಣುಕುಗಳನೆಣಿಸುವರು ಯಾರು? ?
 
"ಶಬ್ದದಲಿ ಪರಿಮಿತವು ಅರ್ಥದಲ್ಲಿ ಅಪರಿಮಿತ
ಈ ತಮ್ಮ ಸಾಹಿತ್ಯ ದಿವ್ಯ ಚಿಂತಾಮಣಿಯು
ಇಂತೆಂದು ಭಾವಿಸಿಹ ಸುಜನರ ಈ ಸಭೆಯು
ಆಲ್ಪಮತಿಗಳ ಕಂಡು ಪರಿಹಾಸ ಮಾಡುತಿದೆ''
 
ಅನುವ್ಯಾಖ್ಯಾನ ಗ್ರಂಥ ರಚನೆ
 
'ಪುರುಹೂತನಂತಹ ದೇವತೆಗಳಿದ್ದರೂ
ತಾರಕನ ವೈರಿಯನೇ ಅಮರರಿಚ್ಛಿಸಿದಂತೆ
ಇಷ್ಟೊಂದು ಗ್ರಂಥಗಳ ತಾವು ರಚಿಸಿದ್ದರೂ
ಮತ್ತೊಂದು ಗ್ರಂಥವನು ತಮ್ಮಿಂದ ಬಯಸುವೆವು''
 
ಗಂಭೀರವಾಗಿರುವ ಈ ಗ್ರಂಥ ಯುಕ್ತಿಗಳು
ಮನದ ಮಾಂದ್ಯತೆಯಿಂದ ನಮಗೆ ಅವು ಅಗ್ರಾಹ್ಯ
ಅಂತಹ ಯುಕ್ತಿಗಳ ಸರಳಗೊಳಿಸುವ ಹಾಗೆ
ಮತ್ತೊಂದು ಗ್ರಂಥವನು ದಯಮಾಡಿ ರಚಿಸಿರಿ''
 
ಮಧ್ವಮುನಿಗಳು ಇಂತು ಪ್ರಾರ್ಥನೆಗೆ ಓಗೊಟ್ಟು
ಸಜ್ಜನಕೆ ಸುಧೆಯಂತೆ, ದುರ್ವಾದಿ ಗರ್ವಕ್ಕೆ ವಜ್ರಸದೃಶದಂತೆ
 
ಮಾಯಿಗಳ ಕತ್ತಲೆಗೆ ರವಿಯ ಬೆಳಕಂತೆ
 
ಅನು ಭಾಷ್ಯವೆಂಬುವ ಗ್ರಂಥವನು ರಚಿಸಿದರು
 
ಹದಿನೈದನೆಯ ಸರ್ಗ / 263
 
83
 
84
 
85
 
86
 
87
 
88