This page has not been fully proofread.

ರೂಪಾದಿ ಜ್ಞಾನವನ್ನು ಮುಕ್ತ ಹೊಂದಿರುವನು
ಈಶ್ವರನ ತೆರದಲ್ಲಿ ಸತ್ ಅವನು, ಜಡವಲ್ಲ
ಈಶ್ವರನು ಸರ್ವಜ್ಞನೆಂದು ನೀ ಒಪ್ಪಿದರೆ
ಸಾಧ್ಯ ವೈಕಲ್ಯದ ದೋಷ ಉಂಟಾಗದು
 
ರೂಪಾದಿ ಅನುಭವವು ಈಶ್ವರಗೆ ಉಂಟು
ಆದರೂ ಈಶ್ವರನು "ಸುಖ' ವ ಪಡೆದವನಲ್ಲ
ಸುಖಿಯಾದ ಚೇತನಕೆ ದು:ಖವೂ ಉಂಟೆನಬೇಡ
ಇಂತಹ ವ್ಯಾಪ್ತಿಯನ್ನು ನಾವು ಒಪ್ಪುವುದಿಲ್ಲ
 
ಈಶ್ವರನ ದೃಷ್ಟಾಂತ ಒಪ್ಪದೇ ಇದ್ದಲ್ಲಿ
ಪಾಷಣದಂತೆಂಬ ದೃಷ್ಟಾಂತ ನೀಡುವೆವು
ಶುದ್ಧ ಚಿದ್ದೇಹೇಂದ್ರಿಯ ಭೋಗವನು
ಮುಕ್ತನನುಭವಿಸುವನು ಪರಲೋಕದಲ್ಲಿ
 
ಸ್ವಾನಂದ ಅನುಭವದ ಮೋಕ್ಷದ ವಿಷಯವು
ವೇದೋಕ್ತವಾಗಿಹುದು ಮುಕ್ತಿಸಾಧಿತವಹುದು
ಈ ಬಗ್ಗೆ ದ್ವೇಷಕ್ಕೆ ಕಾರಣವು ಏನು ?
ನಿರ್ವಿಶೇಷ ಬ್ರಹ್ಮನಲಿ ಆಗ್ರಹವು ಏಕೆ ?
 
"ವೇದಗಳು ಆಗಿಹವು ಸ್ವಪ್ರಮಾಣಿತವು
ಕ್ರೀಡಾದಿಗುಣಶಿಷ್ಠ ವೇದ ಪ್ರತಿಪಾದ್ಯನು
ಶ್ರೀ ಹರಿಯು ನೀಡುವನು ಮೋಕ್ಷಾದಿಗಳನು"
ಇಂತೆಂದು ಒಪ್ಪಿದರೆ ಲಭಿಸುವುದು ಮಂಗಲವು
 
ತ್ರಿವಿಕ್ರಮ ಪಂಡಿತರ ವಾದಕಥಾ
 
ಇತ್ಯಾದಿ ಶಾಸ್ತ್ರಗಳ ಅರ್ಥಗಳ ವಿವರಿಸುವ
ಆನಂದ ತೀರ್ಥರ ವ್ಯಾಖ್ಯೋಪನ್ಯಾಸಗಳ
ಪಂಡಿತೋತ್ತಮರಾದ ಆ ತ್ರಿವಿಕ್ರಮರು
ಏಕಾಗ್ರ ಚಿತ್ರದಲ್ಲಿ ಶ್ರವಣ ಮಾಡಿದರು.
 
ಹದಿನೈದನೆಯ ಸರ್ಗ / 259
 
59
 
60
 
61
 
62
 
63
 
64