This page has not been fully proofread.

ಬ್ರಹ್ಮಾದಿ ತತ್ವಗಳು ಭಾವ ವಸ್ತುಗಳಲ್ಲ
ಭೇದರಹಿತವು ಅವು ಶೂನ್ಯಾತ್ಮಕ ವಹುದು
ಧ್ಯಾನ ವಿಷಯಕವು ಅಲ್ಲ, ಶ್ರವಣ ಮನನವು ಸಲ್ಲ
ಅಭೀಷ್ಟ ಫಲಗಳನ್ನು ಕೊಡುವಂಥವಲ್ಲ
 
ಗಗನ ಕುಸುಮದ ತೆರದಿ ಈ ಬ್ರಹ್ಮಾದಿ ತತ್ವಗಳು
ವಿಚಾರ್ಯವಾಗದದು; ಧೈಯವೂ ಆಗದು
ಪ್ರಮಾಣಾದಿಗಳಂತೆ ಈ ತತ್ವಗಳನು
ವ್ಯತಿರೇಕ ದೃಷ್ಟಾಂತ ಊಹಿಸುತಲಿರಬೇಕು
 
ವೇದಗಳು ಅಪ್ರಮಾಣವೆಂದು ತಿಳಿದಲ್ಲಿ
ಧರ್ಮಾದಿ ಭಾವಗಳು ಅಪ್ರಾಮಾಣ್ಯವಾಗುವುವು
ಪ್ರತ್ಯಕ್ಷವೇ ಪ್ರಮಾಣ ಎಂದು ನಂಬುವ ಮಂದಿ
ಧರ್ಮದಭಾವವನ್ನು ಸಾಧಿಸಲು ಸಾಧ್ಯವೆ ?
 
ಧರ್ಮಾದಿ ವಸ್ತುಗಳು ಅತೀಂದ್ರಿಯವು ಅಹುದು
ಪುರುಷಕೃತ ವಾಕ್ಯಗಳು ಪ್ರಮಾಣ ವಲ್ಲವವ
ಉನ್ಮತ್ತನೊಬ್ಬನು ಮಾತನಾಡುವ ತೆರದಿ
ಇಂತಹ ವಾಕ್ಯಗಳು ಅಪ್ರಮಾಣವಾಗುವುವು
 
ವಿಮತನೊಬ್ಬನು ಅಜ್ಞ, ವಂಚಕನು ಇರಬಹುದು
"ಪುರುಷನಾಗಿಹ ಆತ ಚೈತ್ರನಂತೆ"
ಓರ್ವನನು ಸರ್ವಜ್ಞನೆಂದು ಸಾಧಿಸುವಲ್ಲಿ
ಇಂತಹ ಯುಕ್ತಿಗಳು ಸರ್ವಥಾ ಸಲ್ಲ
 
ಆಗ್ರಹವನಿರಿಸಿದರೆ ದುಃಶಾಸ್ತ್ರಗಳಲ್ಲಿ
ಪರದೈವ ಜ್ಞಾನವು ತಪ್ಪಾಗಿ ತಿಳಿಯುವುದು
ದುಃಖಕ್ಕೆ ಆಕರವು ಅತಿ ಘೋರ ಲೋಕವು
ಇದರಿಂದ ದೊರೆಯುವುದು ಅಜ್ಞಾನಿಗಳಿಗೆ
 
256 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
41
 
42
 
43
 
44
 
45
 
46