This page has not been fully proofread.

ಓ, ತಾಪಸನೆ ! ನೀನೀಗ ನನ್ನ ಮಾತನು ಕೇಳು
ಕುಂಬಾರನಂತೇ ಜಗಕೆ ಶೂನ್ಯ ಕಾರಣವಲ್ಲ
ಶೂನ್ಯದ ಅರಿವಿರದ ಯಾವ ಜಗ ಕಾಣುವುದೋ
ಅಂತಹ ಶೂನ್ಯವೇ ಈ ಜಗಕೆ ಕಾರಣವೆ ?
 
ಓ ದೀರ್ಘಾಯು ಮಾನವನೆ ! ಈ ಮಾತ ಕೇಳು
 
ಅಂತಹ ಶೂನ್ಯವದು ಜಗಕೆ ಕಾರಣವಲ್ಲ
"ಅಧಿಷ್ಠಾನ" ಎಂಬುವ ಶೂನ್ಯವನು ನೀನು
ಗುರುಗಳ ಗೃಹದಲ್ಲಿ ಸರಿಯಾಗಿ ಅರ್ಥೈಸು
 
ಶೂನ್ಯವೆಂಬುದು ಒಂದು ಭಿನ್ನಮತ ವಿಷಯ
"ಅಸತ್ " ಆಗಿಹುದು ಅದು ಆಧಾರವಾಗದು
ಅಧಿಷ್ಠಾನವಾಹುದಕೆ ಸತ್ ಆಗಬೇಕು
ಶುಕ್ಯಾದಿಗಳ ತೆರದಿ ವೈಧರ್ಮ ದೃಷ್ಟಾಂತವಿದು
 
ಅತತ್ವಾವೇದಕವು ಪ್ರಮಾಣವೆಂಬುವ ಮಾತು
ಅತ್ಯಂತ ವ್ಯಾಹತವು, ಆಭಾಸ ಉಕ್ತಿ
ವೇದಗಳು ಅತತ್ವಾವೇದಕವೆನ್ನುವ ಮಂದಿ
ವೇದಗಳ ಪ್ರಾಮಾಣ್ಯ ಅಲ್ಲಗಳೆದಂತಾಯ್ತು
 
ಮಾಯಾವಾದಿಗಳೆಲ್ಲ ವೇದ ದೂಷಕರಹುದು
ಅವಾಚ್ಯವಾಗಿಹುದವರ ಆ ಬ್ರಹ್ಮತತ್ವ
ವೇದಾಂಗವೆನಿಸಿರುವ ಉಪನಿಷತ್ತುಗಳನ್ನು
ತತ್ವಾವೇದಕವೆಂದು ಹೇಗೆ ಎಣಿಸುವರು ?
 
ಮೂರು ಲಕ್ಷಣದಿಂದ ವೇದವಾಕ್ಯಗಳೆಲ್ಲ
ಬ್ರಹ್ಮ ಲಕ್ಷಣವನ್ನು ಗುರ್ತಿಸುವು ಎಂದಲ್ಲಿ
ಬ್ರಹ್ಮನಿಗೆ ವಾಚ್ಯತ್ವ ರೂಪವೆಲ್ಲವೂ ಕೂಡಿ
ವಿಶೇಷಣವು ಎಂಬುವ ಅನಿಷ್ಟ ಒದಗುವುದು
 
254 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
29
 
30
 
31
 
32
 
33
 
34