This page has not been fully proofread.

ಗುಣಭೇದ ಸಂಬಂಧ ವಿಶ್ಲೇಪಿಸಿದರೆ
ಪರಮಾತ್ಮನ ಸ್ಥಿತಿಯು ವ್ಯಕ್ತವಾಗುವುದು
 
ಈಶ್ವರನ ಗುಣಗಳಿಗೆ ಅಭೇದ ಒಪ್ಪುವೆವು
ಭೇದ ವ್ಯವಹಾರಿಕೆ ಅಡ್ಡಿ ನಮಗಿರದು
 
ವೈಶೇಷಿಕಾದಿಗಳು ವೇದಗಳ ವೈರಿಗಳು
ಶೂನ್ಯವೇ ತತ್ವವೆಂದೆನ್ನುವರು ಕೆಲರು
ಮಾಧ್ಯಮಿಕರೆನಿಸಿರುವ ಬೌದ್ಧಿಕ ದೇಶಗಳು
 
ಎರಡು ಪಂಗಡವಾಗಿ ಒಡೆದಿಹರು ಇಂದು
 
ಮಾಯಾವಾದಿಗಳೆಂಬ ಪ್ರಚ್ಛನ್ನ ಶೂನ್ಯರು
ಕರೆದಿಹರು ವೇದಗಳ ಅತತ್ವವೇದಕವೆಂದು
ಶೂನ್ಯವನೆ ಬ್ರಹ್ಮ ವೆಂದವರು ಕರೆಯುವರು
ತಮ್ಮನ್ನು ವೇದಾಂತಿಗಳು ಎಂದು ಎನ್ನುವರು
 
ವಿಯದಾದಿ ಜಗದೆಲ್ಲ ಅಪರ ತತ್ವಗಳೆಲ್ಲ
ಪರತತ್ವ ಬ್ರಹ್ಮನಲಿ ತೋರಿಹುದು ಎನ್ನುವರು
ಶೂನ್ಯಕ್ಕೂ ಮಿಗಿಲಾದ ವೈಶಿಷ್ಟ್ಯ ಅವಗಿಲ್ಲ
ಬ್ರಹ್ಮ, ಶೂನ್ಯದ ನಡುವೆ ಭೇದವೇ ಇಲ್ಲ
 
ತಮ್ಮ ಸಿದ್ಧಾಂತಗಳ ಮನ್ನಿಸದ ಮಂದಿಗಳ
ತರ್ಕವಿಲ್ಲದ ನ್ಯಾಯದಾಭಾಸಗಳನೆಲ್ಲ
ಸೂಕ್ತ ತರ್ಕದ ಸಹಿತ ಶಾಸ್ತ್ರಸಮ್ಮತವಾಗಿ
ಖಂಡಿಸುತ ನಡೆದರು ಆನಂದ ತೀರ್ಥರು
 
ಜಗಕೆ ಕಾರಣವಲ್ಲ ವಿಮತವಾಗಿಹ ಶೂನ್ಯ
ಕಾರಣವು ಸತ್ ಎಂಬುದಾಗಿರಲೇಬೇಕು
ಕುಂಭಕಾರನ ತೆರದಿ ವ್ಯತಿರೇಕ ಅನುಮಾನ
ಇದರಿಂದ ಆ ಶೂನ್ಯ ಹುಸಿಯಾಗಬೇಕು
 
ಹದಿನೈದನೆಯ ಸರ್ಗ / 253
 
23
 
24
 
25
 
26
 
27
 
28