This page has not been fully proofread.

ಈ ರೀತಿ ಯುಕ್ತಿಯನ್ನು ಮುಂದಿರಿಸಿದಲ್ಲಿ
ಭಗವಂತನಜ್ಞಾನಿ, ಭ್ರಾಂತಿರಹಿತನು ಎಂದಾಗುವುದು
ಜ್ಞಾನವಿಲ್ಲದ ಆತ ಭ್ರಾಂತಿ ಶೂನ್ಯನು ಹೇಗೆ ?
ಸಂಸಾರಿ ಜೀವನೊಲು ಇದು ಸಾಧ್ಯವೆ?
 
ಸರ್ವಜ್ಞದಜ್ಞತ್ವ ಎಲ್ಲಿಯದು ಎಂದು
ವೇದಗಳು ವಾದಿಸಿ ಎಂದೆಲ್ಲ ಬಲ್ಲೆವು
ಆ ವೇದಗಳೆ ಈಶ್ವರನು ಆನಂದ ಪೂರ್ಣ
ಇಂತೆಂದು ಬಣ್ಣಿಪುದ ನೀ ಕೇಳಿಲ್ಲವೇನು ?
 
ಈಶ್ವರಗೆ ದುಃಖವನ್ನು ಪರಿಹರಿಸಲೆಂದು
 
ಸುಖವನೂ ಆತನಿಗೆ ನೀಡರವಿವೇಕಿಗಳು
 
ಆತನಿಗೆ ದುಃಖತ್ವ ಇಲ್ಲವೆಂದಾದಲ್ಲಿ
ಚೇತನತ್ವವು ಅವಗೆ ಎಲ್ಲಿಂದ ಬಹುದು ?
 
.ಚೈತ್ರನಲ್ಲಿ ಇರುತಿಹುದು ದುಃಖ ಸಮವಾಯ
ಜ್ಞಾನ, ಇಚ್ಛೆಗಳೆರಡು ಸಮವಾಯ ಅಂಗಗಳು
ಈಶ್ವರನು ಹೊಂದಿಹನು ಈ ಎರಡು ಅಂಗಗಳ
 
ಎರಡು ಸಮವಾಯಗಳ ಭಿನ್ನತೆಯು ಸರಿಯೆ ?
 
ಉಪಾಧಿ ಭೇದವನು ಒಪ್ಪುವೆಯ ನೀನು ?
ಈ ಭೇದ ಸತ್ಯವೋ ಮಿಥ್ಯವೋ ಹೇಳು
ಇದರಿಂದ ಈ ಶನಿಗೆ ದೋಷ ಉಂಟಾಗುವುದು
ಮಾಯಿಗಳ ಪಕ್ಷವನು ನೀ ತಿಳಿಯಲಾರೆ
 
ಈಶ್ವರನ ಗುಣಗಳಿಗೆ ಭೇದವಿಹುದೆನ್ನುವರು
ಸಮವಾಯಕುಂಟೆ ? ಔಪಾಧಿಕ ಭೇದ ?
ಅವರ ಈ ಯುಕ್ತಿಯದು ಶಾಸ್ತ್ರ ಸಮ್ಮತವಲ್ಲ
ಪರಮಾತ್ಮನೆಂದೆಂದೂ ಗುಣ ಪೂರ್ಣನಾಗಿಹನು
 
252 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
17
 
18
 
19
 
20
 
21
 
22