This page has not been fully proofread.

ಈ ಜಗದ ಸೃಷ್ಟಿಗೆ ಚೇತನವು ಅಂಗ
 
ಆ ಚೇತನವು ಅಂಗಿ ಎಂದು ಸಾರುವ ಮತವು
 
ಈಶ್ವರನ ಸ್ವಾತಂತ್ರ್ಯ
ತರ್ಕಗಳಿಗಾ ತರ್ಕ ಗ್ರಾಹ್ಯವಾಗುವುದಿಲ್ಲ
 
ಮನ್ನಿಸದೆ ಹೋದಲ್ಲಿ
 

 
ಸಕಲವೂ ಸರ್ವಜ್ಞ ಪರಮಾತ್ಮ ನಿರ್ಮಿತ
ಆತ್ಮನ ಪರಿಯಲ್ಲಿ ವಿಶ್ವವೂ ಅನಿತ್ಯ
ಅದರಿಂದ ಇವೆರಡು ಈಶ್ವರನ ಸೃಷ್ಟಿ
ಇಂತಹ ಮುಕ್ತಿಯಲಿ ಈಶ್ವರನು ಮಾನ್ಯ
 
ಸಕಲ ಅನುಮಾನಕೂ ವೇದಗಳ ಬೆಂಬಲ
ಶೃತಿಮಾನ್ಯ ವಲ್ಲದ ಅನುಮಾನವೆಲ್ಲ
ಪತಿಯಿಂದ ವರ್ಜಿತ ಕಾಮಿನಿಯ ತೆರದಲ್ಲಿ
ಪ್ರತಿವಾದಿಗಳ ಇಚ್ಛೆ ಅನುಸರಿಸುವವು
 
ಈ ವಿಶ್ವವೆಲ್ಲಕೂ ಬ್ರಹ್ಮನೇ ಚೇತನನು
ಅದರಿಂದ ಪರಿಣಾಮ ಕಾರಣವು ಅವನ
ಪರಿಣಾಮ ಕಾರಣವು ಚೇತನವು ಅಲ್ಲ
ಹಾಲಿನ ದೃಷ್ಟಾಂತ ಇಲ್ಲಿ ದಿಟವಹುದು
 
ಪಶುಪತಿಯು ಎಂದೆಂದೂ ವಿಶ್ವಕಾರಣನಲ್ಲಿ
ಚೈತ್ರದಂತಿವನಲ್ಲಿ ದೋಷಗಳು ಇಹವು
ಗಣಪತಿ ಸೂರ್ಯರೂ ವಿಶ್ವಕಾರಣರಲ್ಲ
ಎಂಬುದಿದು ಕೈಮುತ್ಯ ಸಿದ್ಧವಾಗಿಹುದು
 
ಸುಖಾದಿ ಗುಣಗಳನು ಈಶ್ವರನು ಹೊಂದಿಲ್ಲ
ದುಃಖಾದಿ ಗುಣಗಳನೂ ಆತ ಹೊಂದಿಲ್ಲ
ಸುಖಾದಿಗಳನಾವ ಹೊಂದಿರುವುದಿಲ್ಲವೋ
 
ಸಾಂಸಾರಿಕನ ತೆರದಿ ಅವ ದು:ಖವನೂ ಹೊಂದನು
 
ಹದಿನೈದನೆಯ ಸರ್ಗ / 251
 
11
 
12
 
13
 
14
 
15
 
16