This page has not been fully proofread.

ಬ್ರಹ್ಮ ಸೂತ್ರಗಳೆಂಬ ರಥ ಸಮೂಹಗಳಿಂದ
ನಾಲ್ಕು ವೇದಗಳೆಂಬ ಗಜ ನಿವಹದಿಂದ
ಚತುರೋಕ್ತಿಯೆಂಬುವ ಕಾಲಾಳು ಪಡೆಯಿಂದ
ಸ್ಮೃತಿಯೆಂಬ ಅಶ್ವಗಳ ಬಲದಿಂದ ಕೂಡಿತ್ತು
 
ವೃದ್ಧಿ ಹಾಸಗಳಿಂದ, ಶ್ರೀ ಹರಿಗೆ ಪ್ರಿಯವಾದ
ಮೇಘಗರ್ಜನೆಯಂಥ ಸುಸ್ವರದಿ ಕೂಡಿರುವ
ವಿವರದಲಿ ಅರ್ಥಗಳ ನೀಡುವ ಪ್ರವಚನವು
ಸಾಗರದಿ ಜನಿಸಿದ ಲಕುಮಿಯಂತಿತ್ತು
 
ಪದ್ಮಶ ಪದ ಪದ್ಮದಾಶ್ರಿತ್ಯ ಭಾರತಿ
ಕಮಲ ಸಂಭವನಾದ ನಾಗದ ಬ್ರಹ್ಮ
ಈಶ್ವರನ ಶಿರದಲ್ಲಿ ಲಾಲಿತಳು ಗಂಗೆ
ಇವರ ಸಂಗಮವಾಯ್ತು ಮಧ್ಯಪ್ರವಚನದಲ್ಲಿ
 
ಮದಾಚಾರ್ಯರ ಉಪದೇಶ ಸಾರ
 
"ನಾರಾಯಣನು ಅನಂತ ಗುಣನಾಗಿಹನು
 
ಬ್ರಹ್ಮನಾಯಕನಿವನು; ವೇದ ಪ್ರತಿಪಾದ್ಯನು
ವಿಶ್ವಕರ್ತನು ಇವನು: ವಿಶ್ವಜ್ಞನವನು"
ಶೃತಿಯುಕ್ತಿಯಿಂದಿಂತು ಅವರು ಮಂಡಿಸಿದರು
 
"ಪ್ರಧಾನವಪರಾಧೀನವಾಗಿಹುದು ಹಾಲಿನಂತೆ
 
ಎಂಬೊಂದು ದೃಷ್ಟಾಂತ ನೀಡಿದರೆ ನಾವು
ಸಾಧ್ಯ ವೈಕಲ್ಯದ ದೋಷ ಉಂಟಾಗುವುದು
ಇಂತೆಂದು ನಿರೀಶ್ವರವಾದ ಖಂಡಿಸಿದರು
 
ಸೃಷ್ಟಿಯ ಕ್ರಿಯೆಯೀಗ ವಿವಾದ ವಿಷಯ
ಸೃಷ್ಟಿಯು ಚೇತನನ ಇಚ್ಛೆಯಂತಿಹುದು
ವಸ್ತ್ರವನು ನೇಕಾರ ಸೃಷ್ಟಿಸುವ ತೆರದಲ್ಲಿ
ಪರಮಾತ್ಮ ಸೃಷ್ಟಿಸಿಹ ಜೀವ ಜಡ ಜಗವನ್ನು
 
5
 
7
 
8
 
10