This page has not been fully proofread.

ಶ್ರೀ ಗುರುಭೋ ನಮಃ
ಹದಿನೈದನೆಯ ಸರ್ಗ
 
ಅಮರಾಲಯದಲ್ಲಿ ಅಪೂರ್ವ ಭಾಷೋಪನ್ಯಾಸ
 
ಆ ಬಳಿಕ ಮತ್ತೊಮ್ಮೆ ಆನಂದ ತೀರ್ಥರು
ಹಳ್ಳಿಯಲಿ ಹಳ್ಳಿಗರು ಎಲ್ಲರೂ ಸೇರುವ
ಅಮರಾಲಯ ಎಂಬ ಸ್ಥಳದಲ್ಲಿ ಕುಳಿತು
ಅದ್ಭುತದ ಭಾಷ್ಯವನ್ನು ಪ್ರವಚನವ ಮಾಡಿದರು
 
ತ್ರಿವಿಕ್ರಮ ಪಂಡಿತರಿಂದ ಉಪನ್ಯಾಸ ಶ್ರವಣ
ಅನ್ಯ ಸಿದ್ದಾಂತದ ರಥವೊಂದನೇರುತ್ತ
ತೀಕ್ಷ್ಯಯುಕ್ತಿಗಳೆಂಬ ಆಯುಧವ ಹೊಂದಿದ್ದ
ಪಂಡಿತೋತ್ತಮರಾದ ಶ್ರೀ ತ್ರಿವಿಕ್ರಮರನ್ನು
ಪ್ರತಿವೀರನೆಂಬಂತೆ ಮಧ್ವಮುನಿ ಕಂಡರು
 
ಶ್ರೀಮದಾಚಾರ್ಯರ ಉಪನ್ಯಾಸ ವೈಭವ
ಹರಿಯೇ ಸರ್ವೋತ್ತಮ ಎಂದೆನುತ ಸಾಧಿಸುವ
ಮಧ್ವರ ಪ್ರವಚನವು ಆಗ್ರಹವ ಹೊಂದಿದ್ದು
ಸ್ವಾಮಿಯ ವಿಜಯದಲಿ ಶಿಬಿರದಿಂ ಹೊರಡುವ
ಸೈನಿಕರ ತೆರದಲ್ಲಿ ಹೊರಸೂಸುತಿತ್ತು
 
ಅತಿ ಮಂದವಿರದ ಗತಿ, ವೇಗವೂ ಅಲ್ಲದುದು
ಶಬ್ದಾರ್ಥ ಸ್ಟಾಲಿತ್ಯ ಹೊಂದದಿಹುದು ಅದು
ಸ್ವರವರ್ಣ ರೂಪಗಳ ಅವಯವವ ಹೊಂದಿರದೆ
ಪ್ರವಚನವು ಸಂಕೀರ್ಣ ಜಲಧಾರೆಯಂತಿತ್ತು
 
1
 
2
 
3