This page has not been fully proofread.

ಅವನಿ, ವನ, ಪವನಾಗ್ನಿ, ಆಕಾಶ, ನಾನೆಂಬ
ಆರು ಹಿರಿ ತತ್ವಗಳ, ಸತ್ವ, ರಜ, ತಮಸೆಂಬ
ಮೂರು ಗುಣ ಸಹಿತದ ಅವ್ಯಾಕೃತಂಬರದಿ
ವ್ಯಾಪ್ತನಾಗಿಹನವನು, ಭೇದವರ್ಜಿತನವನು
ಅಸುರ, ಸುರ, ನರರಿಂದ ಅತ್ಯಂತ ಭಿನ್ನನು
ಇಂತಹ ಶ್ರೀ ಹರಿಯ ಚಿಂತಿಸಿದರವರು
 
ಕೃತ್ಯಾದಿ ಶಾಸ್ತ್ರದಲ್ಲಿ ವಿಧಿಸಿರುವ ಕ್ರಮದಂತೆ
ಧರ್ಮ ಕುಶಲಿಗಳಾದ ಆ ಅವನಿದೇವರು
ಸೂರ್ಯ ಕಿರಣವು ಕಂಡ ಕ್ಷಣದಿಂದ ಮೊದಲಿಟ್ಟು
ಸೂರ್ಯನಲಿ ಶ್ರೀ ಹರಿಯ ಕಂಡು ಧ್ಯಾನವ ಮಾಡಿ
 
ತಾರೆಗಳು ಗೋಚರಿಪ ಸಮಯದ ವರೆಗೂ
 
ನಿತ್ಯ ಕೃತ್ಯವ ಮಾಡಿ ಧನ್ಯತೆಯ ಪಡೆದರು
 
ದೇವೇಂದ್ರ ರುದ್ರರನು ಆದ್ಯಂತದಲ್ಲಿ
ಹೊಂದಿರುವ ಹದಿನಾರು ದೇವತೆಗಳನ್ನು
ಚೆನ್ನಾಗಿ ಅರಿತಿರುವ ಭೂಸುರರು ಅಂದು
ಹವಿಸನ್ನು ಅಗ್ನಿಯಲಿ ಭಕ್ತಿಯಿಂದರ್ಪಿಸುತ
ಉಚಿತ ರೂಪದ ಅಗ್ನಿಹೋತ್ರವನ್ನು ಮಾಡಿದರು
ಗಾಯಲೋಕವು ಇದರಿಂದ ಲಭಿಸುವುದು
 
ಈ ಚಂದ್ರ ಪ್ರಾಯಶಃ ಅಕಳಂಕನಾದಲ್ಲಿ
ನಿಜ ಸಹೋದರಿಯಾದ ಲಕುಮಿ ಆನನವೆಂಬ
 
ಪೂರ್ಣೇಂದು ಸಮನಾಗಿ ಬೆಳಗಬಹುದಿತ್ತು
ಇಂತೆಂದು ಖೇಚರೀ ಲಲನೆಯರು ಗಗನದಲ್ಲಿ
ಚಂದ್ರ ಸೌಂದರ್ಯವನ್ನು ಕಂಡು ಹಿಗ್ಗುತಲಿರಲು
ಚಂದ್ರಮನು ಉದಿಸಿದನು ಅಂಬರದ ತುದಿಯಲ್ಲಿ
 
ಹದಿನಾಲ್ಕನೆಯ ಸರ್ಗ / 245
 
48
 
50
 
51