This page has not been fully proofread.

ಮನವ ನಿಗ್ರಹಿಸಿದ ಸನ್ಯಾಸಿಯೊಬ್ಬರು
ದೀಪಗಳು ಬೆಳಗುತಿಹ ಅರುಣಕಾಲದೊಳೆದ್ದು
ಮಧ್ವಮುನಿಗಳ ಬಳಿಯ ಶ್ರೇಷ್ಠತಮ ಶಂಖದಲಿ
ಅರ್ತ್ಯ ಪಾದ್ಯಾದಿಗಳ ದೇವರಿಗೆ ಅರ್ಪಿಸಿ
ಶಾಲಗ್ರಾಮಗಳಿಂದ ನಿಬಿಡವಾಗಿಹ ಹರಿಯ
ಪ್ರತಿಮೆಗಳ ಮಧ್ಯದಿಂ ಪುಷ್ಪಗಳ ತೆರೆದು ಆದರದಿ ಇರಿಸಿದರು
 
ಪ್ರತಿನಿತ್ಯ ಅಮೃತವೇ ದೇವತೆಗಳಿಗಶನವು
ಇಂಥ ದೇವತೆಗಳು ಮಧ್ವರನು ಸೇವಿಪರು
ನಿರ್ಮಾಲ್ಯ ಪುಷ್ಪದಲಿ ಸುರಿದ ಅಮೃತವನ್ನು
ಧೃತವೆಂದೇ ತಿಳಿದರು ಆ ಮಧ್ವಶಿಷ್ಯರು
ಮಧ್ವಮಾಹಾತ್ಮವನು ಬಲ್ಲ ಸ್ತೋತ್ತಮರಿಂದ
ಭ್ರಮೆ ನಿವಾರಿಸಿಕೊಂಡು ಅಮೃತ ವನರಿತರು
 
ಗಾಯತ್ರಿ ಮುಂತಾದ ಮಂತ್ರದಿಂದಲಿ ಕೂಡಿ
ಮೂರು ಉದಯಗಳನ್ನು ಹೊಂದಿಹನು ಸೂರ್ಯ
ಮೂರು ವಿಧ ಶಕ್ತಿಗಳ ಹೊಂದಿರುವ ಆತ
 
ಮಂಡಲದ ಮಧ್ಯದಲಿ ವಿಷ್ಣುವನು ಧರಿಸಿಹನು
ಉಷ್ಣಕಿರಣ ಎಂಬ ಹೆಸರನ್ನು ಹೊತ್ತಿರುವ
ಸೂರ್ಯ ಸಾಮ್ರಾಟನು ಆಗ ಉದಿಸಿದನು
 
ಕತ್ತಲೆಯು ಅತಿ ತೀಕ್ಷ್ಯ, ಅತ್ಯಂತ ಸ್ಥಿರವಹುದು
ಪ್ರಾಣಿಗಳ ಮಾರ್ಗಕ್ಕೆ ಅಡ್ಡಿಯನ್ನು ಮಾಡುವುದು
ಭುವನ ಮಂದಿರದಲ್ಲಿ ವ್ಯಾಪ್ತವಾಗಿಹುದು ಅದು
ಅಂಜನವ ಹೋಲುವ ಕತ್ತಲೆಂಬುವ ಆನೆ
ಸಿಂಹಗಳ ನಖದಿಂದ ತತ್ತರಿಸಿ ಬಿದ್ದಂತೆ
ಸೂರ್ಯ ಕಿರಣಗಳಿಂದ ಕತ್ತಲೆಯು ಬಿತ್ತು.
 
236 / ಶ್ರೀ ಸುಮಧ್ವವಿಜಯ, ಕನ್ನಡ ಕಾವ್ಯ
 
12
 
13
 
14
 
15