This page has not been fully proofread.

ಹನುಮಂತನೆಂಬೊಂದು ಹೊಸ ಮುಗಿಲು ಬಂದು
 
ಶ್ರೀರಾಮ ಸಂದೇಶ ಜಲವನ್ನು ತಂದು
ವೈದೇಹಿಯೆಂಬೊಂದು ಸಹ್ಯವನ್ನು ಕಂಡು
ಮುದಗೊಳಿಸಿತಾ ಗಿಡವ ಜಲಧಾರೆ ಎರೆದು
ಕಾನನವ ಹೋಲುವಾ ಅಸುರ ನಿಕರವ ಸುಟ್ಟು
 
ಮರಳಿ ತೆರಳಿತು ಸೇರಿ ರಾಮಪದದಾಗಸವ
 
ಗರುಡನಂದದಿ ಇವಗೆ ರೆಕ್ಕೆಗಳು ಇಲ್ಲ
ಖಗರಾಜನಂತಿವನು ಹಾರಬಲ್ಲವನಲ್ಲ
ಹಕ್ಕಿಯಂತಿರದೀತ ಹಾವುಗಳ ಮೆಲ್ಲ
ಜಗವನ್ನೇ ಹೊತ್ತಿರುವ ಶ್ರೀರಾಮಚಂದ್ರನನು
ಭುಜದಲ್ಲಿ ಕುಳ್ಳಿರಿಸಿ ಆ ಹನುಮದೇವ
ಹಾರಿದನು ಭಕ್ತಿಯಲಿ ಆತನನ್ನು ಪೊತ್ತು
 
ರಘುವಂಶಕೇತು ಶ್ರೀರಾಮದೇವರು
ಹುಬ್ಬುಗಂಟಿಕ್ಕಿದರು ನಸುಕೋಪದಿಂದ
ಸಾಗರದ ಸಾಮ್ರಾಟನಂಜಿದನು ಆಗ
ಸಿದ್ಧವಾಯಿತು ಸೇತು ಸಾಗರದ ಮಧ್ಯದಲಿ
 
ಲಂಕೆಯ ಕಾಳಗದಿ ಹನುಮದೇವನು ಅಂದು
 
ರಾವಣಗೆ ತಿನಿಸಿದನು ಮುಷ್ಟಿಪ್ರಹಾರ
 
ಲಂಕೆಯಲ್ಲಿನ ಯುದ್ಧ ಯಜ್ಞವೊಂದಂತಾಯ್ತು
ಪ್ರಜ್ವಲಿಸಿ ಉರಿದಿತ್ತು ರಾಮನೆಂಬಾ ಅಗ್ನಿ
ಯಜಮಾನನಾದನು ಸುಗ್ರೀವ ರಾಜ
ಋತ್ವಿಜನು ಲಕ್ಷ್ಮಣನು ಪ್ರತಿಪ್ರಸ್ಥಾತೃ!
ಯಜ್ಞದಾ ಅಧ್ವರ್ಯು ಹನುಮಂತ ದೇವ!
ಇದ ನೋಡಿ, ಕಾಳಗದ ಅಧ್ಯಾತ್ಮ ದೃಷ್ಟಿ!
 
ಮೊದಲನೆಯ ವರ್ಗ/7
 
15
 
16
 
17
 
18