This page has not been fully proofread.

"ಒದಗಿಹುದು ಅವಕಾಶ ವಿಧಿಯ ಬಲದಿಂದೊಂದು
ಮಧ್ವಮುನಿಯೆಂಬುವ ಪ್ರತಿವಾದಿ ಗಜವನ್ನು
ಕೂಡಲೇ ಎದುರಿಸಿರಿ ನಿಮ್ಮೆಲ್ಲ ಬಲದಿಂದ
ಸ್ವಜನ ವೃಂದಕೆ ಬಂದ ಭಯವನ್ನು ಪರಿಹರಿಸಿ
ಚಂದ್ರಮನ ತೆರದಲ್ಲಿ ಧವಳ ಕೀರ್ತಿಯ ಗಳಿಸಿ
ನಿಮ್ಮಲ್ಲಿ ಆಶ್ರಯವ ಬೇಡುವೆವು ನಾವಿಂದು"
 
ಮಾಯಿಜನರಿಂದಂಥ ಪ್ರಾರ್ಥನೆಯ ಕೇಳಿ
ಪೇಚಿನಲಿ ಸಿಲುಕಿದರು ಪಂಡಿತಾಚಾರ್ಯರು
 
ತಮ್ಮದೇ ಜನರೆಂಬ ಒಂದು ಕಾರಣದಿಂದ
 
ಅನುಕೂಲಕರವಾದ ಮಾತುಗಳನಾಡಿದರು
 
ಸಂಶಯವ ಪರಿಹರಿಪ ಸಾಮರ್ಥ್ಯವುಳ್ಳವರು
ಮಧ್ವರನು ಜಯಿಪುದಕೆ ಸಂಶಯವ ತಳೆದರು
 
ಮಧ್ವ ವಚನಗಳೆಂಬ ತೀಕ್ಷ್ಯ ಅಂಕುಶವನ್ನು
ಬಲವಾಗಿ ತಿವಿಯುವ ಕೆಲ ಮಧ್ವಶಿಷ್ಯರನ್ನು
ಖೇದಗೊಳಿಸುತ ಅಟ್ಟಿ ಆ ತ್ರಿವಿಕ್ರಮರು
ಮುನಿದೆದ್ದ ಮದ್ದಾನೆ ತೆರದಲ್ಲಿ ಓಡುತ್ತ
ವಿವಿಧ ಉತ್ತರವೆಂಬ ಧೂಳಿಯನು ಎರಚುತ್ತ
ಕುರುಡರನ್ನಾಗಿಸಿತು ಆ ಮಧ್ವ ಶಿಷ್ಯರನು
 
ತ್ರಿವಿಕ್ರಮ ಪಂಡಿತರಿಂದ ಮಧ್ಯಗ್ರಂಥಗಳ ಅಧ್ಯಯನ
 
ಅತಿ ವಿವೇಕಿಗಳವರು, ಪಂಡಿತಾಚಾರ್ಯರು
ರಾತ್ರಿಯ ಕಾಲದಲ್ಲಿ ಅತಿ ಗೋಪ್ಯವಾಗಿ
ಆನಂದ ತೀರ್ಥರ ಗ್ರಂಥ ಸಮುದಾಯವನು
ಸೂಕ್ಷ್ಮಾವಲೋಕನದಿ ಅಧ್ಯಯನ ಮಾಡಿದರು
ಮಧ್ವಮುನಿ ಮಂಡಿಸಿದ ಶಾಸ್ತ್ರ ಸಾರವ ಕಂಡು
ವಿಸ್ಮಯವ ತಳೆದರು ತಮ್ಮ ಮನದಲ್ಲಿ
 
ಹದಿಮೂರನೆಯ ಸರ್ಗ / 229
 
64
 
65
 
66
 
67