This page has not been fully proofread.

"ವೇದಾದಿ ಶಾಸ್ತ್ರಗಳ, ಭಾರತ, ಪುರಾಣಗಳ
ಸಾರಗಳ ಸಂಗ್ರಹಿಸಿ ಸ್ವತಃ ಯೋಚಿಸಬೇಕು
ಅವುಗಳಲ್ಲಿನ ತಿರುಳ ಮನನ ಮಾಡಲೇ ಬೇಕು
ಆ ಮುಕುಂದನು ಸಕಲ ಕಲ್ಯಾಣಗುಣ ಪೂರ್ಣ
ಸ್ಮೃತ್ಯುಕ್ತ ಧರ್ಮಗಳ ವಿಹಿತದಲ್ಲಿ ಆಚರಿಸಿ
ಶ್ರೀ ಮುಕುಂದನ ನಾವು ಅನುದಿನವೂ ಸ್ಮರಿಸೋಣ"
 
ಇಂತು ನಿಶ್ಚಯಿಸುತ್ತ ಆ ಪಂಡಿತಾಚಾರ್ಯರು
ಅಪ್ರತಿಮ ಪ್ರತಿಭೆಯ ನೆರವನ್ನು ಪಡೆಯುತ್ತ
ಅಂತರಂಗದ ದನಿಗೆ ಧ್ವನಿಯನ್ನು ಕೂಡಿಸುತ
ವೇದಗಳ ಅಧ್ಯಯನದಿ ಸ್ವತಃ ತೊಡಗಿದರು
ಈಗಾಗಲೇ ವ್ಯಾಪಿಸಿದ ಗುರುಮಧ್ವ ಕೀರ್ತಿ
ಪಂಡಿತರ ಕಿವಿಗಳಿಗೂ ತ್ವರೆಯಿಂದ ಸೇರಿತು
 
"ಪರಂಪರಾಗತವಹುದು ಈ ಮಾಯಾವಾದ
 
ಇಂತಹ ಪ್ರಾಚೀನ ಶಾಸ್ತ್ರವನ್ನೀಗ
ಮಧ್ವಮುನಿ ಎಂಬುವ ನಿಷ್ಣಾತ ವಾಗ್ರಿಗಳು
ಎಡಬಿಡದೆ ಖಂಡಿಸುತ ದಿಗ್ವಿಜಯ ಸಾರಿಹರು
ಯುಕ್ತಿ ನಿಪುಣರು ನೀವು ಅವರ ಸೋಲಿಸಬೇಕು
ಬೇರಾರಿಗೂ ಈ ಕೆಲಸ ಸಾಧ್ಯವಿಲ್ಲ
 
"ಪಂಡಿತರ ನಿವಹದಲಿ ತ್ರಿವಿಕ್ರಮರು ನೀವು
ವಾದಿಗಜಗಳಲೆಲ್ಲ ಬಲಶಾಲಿಗಳು ನೀವು
ವೇದ ತೀರ್ಥಗಳಲ್ಲಿ ಮಿಂದು ಬಂದವರು
ಶಾಸ್ತ್ರ ವಾರಿಧಿಯಲ್ಲಿ ವಿಹರಿಸಿರುವವರು
ನವಕಾವ್ಯರಸಗಳಲಿ ಅನುರಾಗ ತಳೆದಿಹಿರಿ
ನಿಮ್ಮನೆದುರಿಪ ಗಜವು ಹುಟ್ಟಿಯೇ ಇಲ್ಲ
 
228 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
60
 
61
 
62
 
63