This page has not been fully proofread.

ಸಕಲ ವೇದಾಂಗಗಳ ಅಧ್ಯಯನ ಮಾಡಿ
ಲಿಕುಚ ವಂಶೋದ್ಭವರಾದ ಈ ತ್ರಿವಿಕ್ರಮರು
ಅಂದಿನ ಕಾಲದ ಎಲ್ಲ ಪಂಡಿತ ಗಣದ
ಮಾನ್ಯತೆಯ ಗಳಿಸುತ್ತ ವಿಖ್ಯಾತರಾದರು
ಸಜ್ಜನರು ಎಂಬುವ ದಾರಿಗರ ಉಪಕರಿಸಿ
ಕಾವ್ಯವೆಂಬುವ ಫಲದ ರಸವ ನೀಡಿದರು
 
ಮಾಯಾವಾದವಿದು ತರ್ಕಕ್ಕೆ ದೂರ
ಪೂರ್ವಾಪರ ಚಿಂತನೆಗೆ ಇದು ಒಂದು ಆಭಾಸ
ಇಂತೆಂದು ಅವರಾಗಿ ಪ್ರತಿ ಪಾದಿಸಿದರು
ಅವರ ಸಂಶಯವನ್ನು ಗುರು ನಿವಾರಿಸಲಿಲ್ಲ
 
ಆದರೂ ಗೆಳೆಯರ ಮನವಿಗೆ ಮನಸೋತು
ಗುರುಗಳ ಪ್ರವಚನವ ಶ್ರವಣ ಮಾಡಿದರು
 
ವಾಗ್ವಿಲಾಸದಿ ಕೂಡಿ ಆ ತ್ರಿವಿಕ್ರಮರು
ನಾರಾಯಣನ ತೆರದಿ ವೇದ ನಿಪುಣತೆಯೆಂಬ
ಉದಯವನು ಹೊಂದುತ್ತ ಬಾಲ್ಯವನು ತ್ಯಜಿಸಿದರು
ಇಂತು ಆ ತ್ರಿವಿಕ್ರಮರು ಪ್ರೌಢರಾಗುತ್ತಿರಲು
ಭಾನುಪಂಡಿತನಂಥ ಸಕಲ ವಾದಿಗಳೆಲ್ಲ
ಸೂರ್ಯನೆದುರಿನ ಮಿಣುಕು ಹುಳುವಿನಂತಾದರು
 
ಸಪಾದ ಲಕ್ಷವಿಹ ಮಾಯಾವಾದದ ಗ್ರಂಥ
ಇವುಗಳಲಿ ಪರಿಣತಿಯ ಪಡೆದಿಹರು ತ್ರಿವಿಕ್ರಮರು
ಅತಿ ಸೂಕ್ಷ್ಮಮತಿಯವರು, ಯುಕ್ತಿಶೂರರು ಅವರು
ಹಿರಿಮೆಯಿಂದಲಿ ಅವರು ಜಗದಲ್ಲಿ ಮಾನ್ಯರು
ಇಂತಹ ನಂದನನ ಹತ್ತಿರ ಕರೆದು
ಏಕಾಂತದಲ್ಲಿ ತಂದೆ ಇಂತೆಂದು ಉಸುರಿದರು
 
ಹದಿಮೂರನೆಯ ಸರ್ಗ / 225
 
48
 
49
 
50
 
51