This page has not been fully proofread.

ಭಾಗವತ ಪ್ರವಚನ
 
ಮಧ್ವಮುನಿಗಳ ಶಿಷ್ಯ ಹೃಷಿಕೇಶ ತೀರ್ಥರು
ಅನುರೂಪ ಗುಣಗಳಿಗೆ ಭಾಜನರು ಅವರು
ಭಾಗವತ ವಾಚನದಿ ಪರಮ ಪರಿಣತರು
ಶಿಷ್ಯರಾ ವಾಚನಕೆ ಆನಂದ ತೀರ್ಥರು
ಭವದ ಬಂಧಗಳನ್ನು ಸುಲಭದಲಿ ಪರಿಹರಿಪ
ಚಕ್ರಪಾಣಿಯ ಕಥೆಯ ವ್ಯಾಖ್ಯಾನ ಮಾಡಿದರು
 
ಅವರ ಆ ಕಥನವು ಪರಮ ಧೈರ್ಯದ ಸಾರ
ಮಧುರ ಪುಷ್ಕಲ ಭಾವ, ಪರಿಪೂರ್ಣ ಪಾಂಡಿತ್ಯ
ಸುಪ್ರಸನ್ನತೆಯನ್ನು ಸೂಸುವಾ ಪ್ರವಚನವು
ಪಂಡಿತರ, ಪಾಮರರ ಮನವನ್ನು ಗೆಲಿದಿತ್ತು
ಆನಂದ ಜಲದಿಂದ ತುಂಬಿದ್ದ ಸಾಗರದಿ
ಶೋತೃಗಳನೆಲ್ಲರನೂ ಸಂಪೂರ್ಣ ಮುಳುಗಿಸಿತು
 
ಆನಂದ ತೀರ್ಥರ ದಿವ್ಯ ಲೀಲೆಗಳನ್ನು
ನನ್ನಂಥ ಪಾಮರಗೆ ಬಣ್ಣಿಸಲು ಸಾಧ್ಯವೆ ?
ಆವರ ಆ ಆಸನವು, ಗಮನ, ಸಂಕಥೆಗಳು
ಮುಂತಾದ ಲೀಲೆಗಳ ಸ್ಮರಣೆಯಿಂದಲೆ ಸಾಕು
ಭವದ ಬಂಧನ ನೀಗಿ ಮುಕುತಿ ದೊರಕುವುದು
ಅವುಗಳನು ಬಣ್ಣಿಸಲು ಅಮರರಿಗೆ ಸಾಧ್ಯ
 
ತ್ರಿವಿಕ್ರಮ ಪಂಡಿತರ ಪೂರ್ವೋತ್ತರ
 
ಅಂದಿನಾ ದಿನದಲ್ಲಿ ಆ ಕಾಲದಲ್ಲಿ
ಅಭವದ್ದು ಹರೆಂಬ ಹೆಸರನ್ನು ಹೊತ್ತ
ಲಿಕುಚ ವಂಶೋದ್ಭವರು, ಪಂಡಿತೋತ್ತಮರು
ಆಂಗಿರಸ ಗೋತ್ರದಲ್ಲಿ ಜನಿಸಿದ ಮಹಿಮರು
ಶ್ರೇಷ್ಠತಮ ಕವಿಗಳು, ಉತ್ತಮ ತಪಸ್ವಿಗಳು
 
ಅಖಿಲ ವಾದಿಗಳಿಂದ ವಂದನೀಯರು ಅವರು
 
ಹದಿಮೂರನೆಯ ಸರ್ಗ / 223
 
40
 
41
 
42
 
43