This page has not been fully proofread.

ನರದೇವನನು ಕಾಂಬ ತವಕದಲಿ ಹಳ್ಳಿಗರು
ನೂರಾರು ಸಂಖ್ಯೆಯಲ್ಲಿ ಹಾದಿಯಲಿ ನಿಂದು
 
ಪರಿವಾರದಾಗಮನ ಕಾಂಬುದಕೆ ಕಾದರು
 
ರಾಜನ ಜೊತೆಯಲ್ಲಿ ಗುರುಗಳನೂ ಕಂಡು
ಚಕಿತಗೊಂಡರು ಅವರು ಮಧ್ಯತೇಜವ ಕಂಡು
 
ಆ ಕಾಂತಿ ರಾಶಿಯನು ಕಾತುರದಿ ಸವಿದರು
 
ಶ್ರೀ ಆಚಾರ್ಯರ ಅಪೂರ್ವ ಆಕೃತಿಯ ವರ್ಣನೆ
 
ಮಧ್ವಶಿಷ್ಯರ ಗಡಣ ನೋಡುವುದಕ್ಕೆ ಹಬ್ಬ !
ತೋಳಿನಲ್ಲಿ ಮುದ್ರೆಗಳು, ಶಂಖಚಕ್ರದ ಚಿಹ್ನೆ!
ಕೊರಳಲ್ಲಿ ರಮಣೀಯ ಕಮಲಾಕ್ಷಮಾಲೆ
ಸಂಭ್ರಮದ ಉತ್ಸವದ ಮುಂಚೂಣಿಯಲ್ಲಿ
ನಲಿಯುತ್ತ ನರ್ತಿಸುವ ನರ್ತನವಿಶಾರದರು !
ಇನಿದನಿಯ ಇಂಪಾದ ಗಾಯನದ ಗಾಯಕರು
 
ಗುರುಗಳ ಕರುಣೆಯನ್ನು ಪಡೆಯ ಬೇಕೆನ್ನುವ
ಉತ್ಕಟಾಕಾಂಕ್ಷೆಯಲಿ ಜಯಸಿಂಹ ರಾಜನು
ಕಾಪಟ್ಯವನು ತ್ಯಜಿಸಿ ದಾಸ್ಯವನ್ನು ಹೊಂದಿ
ಜನತೆಯ ಒತ್ತಡವ ಕಿಂಚಿತ್ತು ಲಕ್ಷಿಸದೆ
ಗುರುಗಳನ್ನು ಅನುಸರಿಸಿ ಅತಿ ವಿನಯಭಾವದಲ್ಲಿ
ಕೈಗಳನ್ನು ಜೋಡಿಸುವ ಭಕ್ತಿಯಲಿ ನಡೆದನು
 
ಗುರು ಮಧ್ವರಾಯರದು ಅತಿ ಹಿರಿಯ ವ್ಯಕ್ತಿತ್ವ!
ಇದು ಹೀಗೆಯೇ ಎಂದು ನಿರ್ಧರಿಸಲಾಗದದು
ಆ ದಿವ್ಯ ತೇಜಸ್ಸು ! ಆ ಪ್ರಖರ ಕಾಂತಿಯು !
ಸೂರ್ಯನನು ನಾಚಿಸುವ ಆ ಜಾಜ್ವಲ್ಯ ಪ್ರಭೆಯು
ಅವರು ನಡೆದಾಡುವ ಭೂಮಿಯನ್ನೆಲ್ಲ
 
ಸೂರ್ಯನಿಗೂ ಮಿಗಿಲಾಗಿ ಬೆಳಗಿ ಬರುತಿದ್ದರು
 
ಹದಿಮೂರನೆಯ ಸರ್ಗ / 219
 
24
 
25
 
26
 
27