This page has not been fully proofread.

ಇಂತು ಮುನ್ನಡೆದ ಆ ಮಧ್ವರ ಹಿಂದೆ
ಸಾವಿರದ ಸಂಖ್ಯೆಯಲ್ಲಿ ನಡೆದರಾ ಮಂದಿ
ಪುರುಷಸರ್ವೋತ್ತಮರು, ಆನಂದ ತೀರ್ಥರು
ಅವರನ್ನು ಕಣ್ಣಾರೆ ಕಂಡಿದ್ದ ಮಂದಿಗೆ
ಪಯಣದ ಶ್ರಮವಿನಿತು ತೋರಲೇ ಇಲ್ಲ
ಆಚಾರ್ಯ ಸ್ಮರಣೆಯೇ ಮುಕುತಿಯನು ನೀಡುವುದು
 
ಜಯಸಿಂಹ ರಾಜನಿಂದ ಸ್ವಾಗತ
 
ಮದನಾಧಿಪತಿ ಇರುವ ಆ ತಾಣದಲ್ಲಿ
ಆಚಾರ್ಯ ಮಧ್ವರು ಬಂದಿಹುದ ಕೇಳಿ
ಸ್ತಂಭಕೇಸರಿ ಎಂಬ ಬಿರುದನ್ನು ಹೊತ್ತ
 
ಜಯಸಿಂಹನೆಂಬುವ ಆಳರಸನಾಗ
 
ತನ್ನೆಲ್ಲ ಪರಿವಾರ ಜನರನ್ನು ಕೂಡಿ
ತ್ವರೆಯಿಂದ ಮಧ್ವರನು ಸ್ವಾಗತಿಸ ಹೊರಟ
 
ಮಧ್ವರಾಯರು ಬರುವ ಸ್ವಲ್ಪ ಹೊತ್ತಿಗೆ ಮುನ್ನ
ಜಯಸಿಂಹ ರಾಜನು ಆ ಸ್ಥಳಕೆ ಬಂದು
ತರೆಯಿಂದ ಪಲ್ಲಕ್ಕಿಯಿಂದಿಳಿದು ನಿಂತು
ಅಂಗ ರಕ್ಷಕರನ್ನು ದೂರದಲ್ಲಿರಿಸಿ
ವಿಪ್ರರ ಹಿಂದೆ ತಾ ಗೌರವದಿ ನಡೆದು
ತ್ರಿಜಗವಂದಿತರಾದ ಮಧ್ವರಿಗೆ ನಮಿಸಿದನು
 
ಜಯಸಿಂಹ ರಾಜನಿಗೆ ಗುರುಗಳಲ್ಲಿ ಅತಿ ಭಕ್ತಿ
ವಿನಯ ಗೌರವದಿಂದ ಆದ್ರ್ರವಾಗಿಹ ಮನಸು
ಗುರುಗಳನು ಆದರದ ಸ್ವಾಗತಿಸಿ ರಾಜನು
ಮಧ್ವರನು ಮುಂದಿಟ್ಟು ಹಿಂದೆ ತಾ ನಡೆದನು
ತ್ವರೆಯಿಂದ ಪಯಣಿಸುತ ಆ ಗುರುಶಿಷ್ಯಗಣವು
ವಿಷು ಮಂಗಲದೊಂದು ಮಂದಿರಕ್ಕೆ ಬಂದರು.
 
218/ ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23