This page has not been fully proofread.

ಆಚಾರ್ಯ ಮಧ್ವರು ಮುಖದಲ್ಲಿ ಧರಿಸಿದ್ದ
ಚಕ್ರ ಶಂಖದ ಮುದ್ರೆ, ಊರ್ಧ್ವ ಪುಂಡ್ರಗಳೆಲ್ಲ
ಶುಷ್ಕವಾಗಿಹುದನ್ನು ಶಿಷ್ಯನೊಬ್ಬನು ಕಂಡು
ಧರಿಸಲತಿ ಶ್ರೇಷ್ಠತಮ, ಮನಕೆ ಮುದವನು ಕೊಡುವ
ಶ್ರೀ ಹರಿಯ ನಿರ್ಮಾಲ್ಯ ತುಲಸಿಮಾಲೆಯನೊಂದ
ಗುರುವ ಸಿರಿ ಕಂಠದಲಿ ಭಕ್ತಿಯೊಳು ಮುಡಿಸಿದನು
 
ಉಸಿರು, ಮಾತುಗಳನ್ನು ಅಂಕೆಯಲ್ಲಿ ಇರಿಸುತ್ತ
ಗುರುಮಧ್ವರ ಶಿಷ್ಯ ಯತಿ ಶ್ರೇಷ್ಠರೊಬ್ಬರು
ಪರಿಶುದ್ಧ ಮನದಿಂದ, ಅತಿ ಶುದ್ಧ ಹಸ್ತದಲ್ಲಿ
ಕುಂಡಲದಿ ಶೋಭಿಸುವ, ಗುಣಬದ್ಧವಾಗಿದ್ದ
ಚಕ್ರ, ಮೂರ್ತಿಗಳಿಂದ ತುಂಬಿ ತುಳುಕುತಲಿದ್ದ
ದೇವರ ಪೆಟ್ಟಿಗೆಯ ತಲೆಯಲ್ಲಿ ಹೊತ್ತರು
 
ಮಂಡಲ, ಕಮಂಡಲದ ಭಾರವನ್ನು ಹೊತ್ತು
ಅತಿ ಭಾರ ಪುಸ್ತಕದ ಹೊರೆಯನ್ನು ಹೊತ್ತು
ತರುಣ ಶಿಷ್ಯರ ಗಡಣ ಪಯಣಕ್ಕೆ ಅನುವಾಯ್ತು
ಆಯಾಸದ ಕುರುಹು ಅವರಾರಿಗೂ ಇಲ್ಲ
ದಕ್ಷತೆಯೇ ಮೈವೆತ್ತಿ ನಿಂತ ಆ ಶಿಷ್ಯರಿಗೆ
ಒಪ್ಪಿಸಿದ ಕೆಲಸದಲ್ಲಿ ಅತಿಯಾದ ಆಸಕ್ತಿ
 
ಇಂತು ಆ ಪಯಣಿಗರು ಅಣಿಯಾಗುತಿರಲು
 
ಹೊಸದಾಗಿ ಶಿಷ್ಯಗಣ ಸೇರಿದವನೊಬ್ಬ
ಹೊರೆಯನ್ನು ಬಿಗಿಯುವ ಹಗ್ಗವನ್ನು ಕಾಣದೆ
ಪರದಾಡಿ, ಪರದಾಡಿ, ಎಲ್ಲರಲಿ ಬಂದು
"ಹಗ್ಗವನು ಕಂಡಿರಾ ?" ಎನ್ನುವುದ ಕೇಳಿ
ಮುಳುಗಿದರು ಎಲ್ಲರೂ ನಗೆಗಡಲಿನಲ್ಲಿ
 
216 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15