This page has not been fully proofread.

ಗಂಗಾ ಪ್ರವಾಹವನು ಹೋಲುವಾ ರೀತಿಯಲಿ
ಮಾಯಾವಾದಿಗಳೆಂಬ ಕ್ಷುದ್ರಪರ್ವತ ತ್ಯಜಿಸಿ
ಪರಮ ಸ್ನೇಹಿಗಳಾದ ಸಜ್ಜನರ ಮನವೊಲಿಸಿ
ಮುನ್ನಡೆದ ಆ ನಮ್ಮ ಆನಂದ ತೀರ್ಥರನು
ಉತ್ತುಂಗ ಪರ್ವತದ ಶಿಖರದಲ್ಲಿ ಪ್ರವಹಿಸುವ
 
ನದಿಗಳೋಪಾದಿಯಲ್ಲಿ ಸುಜನರನುಸರಿಸಿದರು
 
ಫಲಪುಪ್ಪ ತುಂಬಿರುವ ಉತ್ತುಂಗ ವೃಕ್ಷಗಳ
ಬಾಗಿಸುತ ಹರಿಯುವುದು ಗಂಗಾ ಪ್ರವಾಹ
ಬಾಗದ ವೃಕ್ಷಗಳ ಮುರಿಯುತ್ತ ಹರಿವುದದು
ಅಂತೆಯೇ ಈ ನಮ್ಮ ಆನಂದ ತೀರ್ಥರು
ಸುಮನಫಲ ಶೋಭಿತರಾದ ಸುಜನರನು ಹರಸುತ್ತ
ದೃಢಮನದ ಜನರನ್ನು ಮುರಿಯುತ್ತ ನಡೆದರು
 
ಪಯಣದ ಸಂಭ್ರಮವು ಅಚ್ಚರಿಯ ಹುಟ್ಟಿಸಿತು
ವಿವಿಧ ದೇಶದ ಜನರ ವಿಧವಿಧದ ಸತ್ಕಾರ !
ಎಲ್ಲೆಡೆಯೂ ಪಸರಿಸಿತು ಮಧ್ವರಾ ಕೀರ್ತಿ
ಸರಿಸಾರ ಕ್ಷೇತ್ರದಲಿ ಮನನೊಂದ ಜನರೆಲ್ಲ
ಅವರೆಡೆಗೆ ಬಂದರು ಪರಿಹಾರ ತಿಳಿಯಲು
ಕಿಕ್ಕಿರಿದು ನೆರೆದಿತ್ತು ಅಭಿಮಾನಿ ಸಮುದಾಯ
 
ಹರಿಪಾದ ಸಂಬಂಧ ಪಡೆದ ಮಹಿಮರು ಇವರು
ಲೋಕದೊಳು ಪಾವನರು, ಜೀವಸರ್ವೋತ್ತಮರು
 
ಮನುಜರಿಗೆ ಸುಲಭದಲ್ಲಿ ಗೋಚರಿಸದೆ ಇರುವ
ದೇವತೆಗಳಿಂದಲೂ, ದೇವಾನುಚರರಾದ ಗಂಧರ್ವರಿಂದಲೂ
 
ಮುನಿಗಣೋತ್ತಮರಿಂದ ಪೂಜಿತರು ಇವರು
 
ಇಂಥ ಮಹಿಮರ ಮಹಿಮೆ ಎಂತು ಬಣ್ಣಿಪುದು ?
 
214/ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
4
 
5
 
6
 
7