This page has not been fully proofread.

ತನ್ನ ಮರಿಯನು ಕೊಂದ ಹಂದಿಯನ್ನು ಕಂಡು
 
ಸಿಂಹ ತಾ ಹಂದಿಯನು ಹೇಗೆ ಬಿಡದಿಹುದೊ
ಅಂತೆಯೇ ಆನಂದ ತೀರ್ಥರೆಂಬುವ ಸಿಂಹ
ಗ್ರಂಥಪಾಲಕನಾದ ಶಂಕರನ ಬೆದರಿಸಿ
ಗ್ರಂಥಗಳ ಅಪಹರಿಸಿ ನಡೆದಿದ್ದ ದುರುಳನನು
ಕ್ಷಮಿಸದೆ ಶಿಕ್ಷಿಸಲು ನಿಶ್ಚಯವ ಮಾಡಿದರು
 
ಈ ಹಿಂದೆ ಆನಂದ ತೀರ್ಥರ ಕೂಡ
ವಾಗ್ಯುದ್ದದಲ್ಲಿ ಸೋತ ಪುಂಡರೀಕನು ಆಗ
ಮಧ್ವರಿಗೆ ಭಯಪಟ್ಟು ಹಿಂದಕ್ಕೆ ಅಡಗಿದ್ದ
ಪದ್ಮತೀರ್ಥಗೆ ಹಿತವನುಂಟು ಮಾಡಲು ಬಯಸಿ
ಹಲವಾರು ಅಂಶಗಳ ಸಭೆಯ ಮುಂದಿರಿಸಿದನು
ಮಧ್ವರಿದ ಖಂಡಿಸಿದರೈದಾರು ವಾಕ್ಯದಲ್ಲಿ
 
ಪದ್ಮತೀರ್ಥಾದಿಗಳ ಪರಾಭವ
 
ದ್ವಾಪರದ ಪಾರ್ಥನಾ ತೆರದಿ ಈ ಮಧ್ವರು
ಪುಂಖಾನುಪುಂಖದಲಿ ವಾಗ್ದಾಣ ಬೀರುತ್ತ
ಹರಿಯ ಸ್ವರೂಪವನು ನಿರ್ಧರಿಸಿ ತೋರುತ್ತ
ತಡೆಯಿರದ ಜಲಧಾರೆಯಂತಿರುವ ನುಡಿಯಿಂದ
ಖಂಡಿಸಲು ಬಾರದ ತರ್ಕನಿಪುಣತೆಯಿಂದ
ಆ ಪದ್ಮತೀರ್ಥನನು ಗೆಲಿದು ಮೆಟ್ಟಿದರು
 
ಶ್ರೀ ಮಧ್ವಶಿಷ್ಯರು ಹಾಡಿದ ಶ್ರೀ ಮಧ್ಯಮಾಹಾತ್ಮ
 
"ಎಲವೆಲವೊ ಚೋರರೆ ! ಭಗವಂತ ನಿಂದಕರೆ !
ನಿಲ್ಲಿಸಿರಿ ಈ ನಿಮ್ಮ ದುಷ್ಕೃತ್ಯಗಳನ್ನು
ನಿಲ್ಲಿಸಿರಿ ಈ ಜಗವು ಮಾಯವೆಂಬುವ ತರ್ಕ
ಓಡಿರಿ, ಓಡಿರಿ, ಇಲ್ಲಿಂದ ಓಡಿರಿ!
ಜನರೆಲ್ಲ ನಿಮ್ಮನ್ನು ಅಟ್ಟುತ್ತ ಬರುತಿಹರು
 
ಗುಹೆಗಳನ್ನು ಸೇರುವ ಕಾಲ ಒದಗಿದೆ ನಿಮಗೆ
 
208 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47