This page has not been fully proofread.

ಐತರೇಯದ ವಾಕ್ಯ "ಅಗ್ನಿನಾ ರಯಿಮಶ್ನವತ್
ಪದವಿಭಾಗವು ಸ್ವಲ್ಪ ಜಟಿಲವಾಗಿಹುದು
ತಪ್ಪಾಗಿ ಹೇಳಿದರೆ ಆಭಾಸವಾಗುವುದು
ವ್ಯಾಕರಣ " ಪಂಡಿತ" ಪುಂಡಲೀಕನು ಆಗ
ತಪ್ಪು ತಪ್ಪಾಗಿದನು ವ್ಯಾಖ್ಯಾನಿಸಿದನು
ತುಂಬಿದ ಸಭೆಯಲ್ಲಿ ನಿಂದೆಗೊಳಗಾದನು
 
ಆ ಮೊದಲು ಪಂಡಿತರ ಸಭೆಗಳಲ್ಲೆಲ್ಲಾ
ಶಾರ್ದೂಲನೆಂದೇ ಖ್ಯಾತಿಯನ್ನು ಗಳಿಸಿದ್ದ
ಪುಂಡರೀಕ ಪುರಿ ಎಂಬ ಆ ಧೂರ್ತ ಗೋಮಾಯು
 
ದುರ್ವಾದಿ ಎಂಬುವ ವ್ಯಾಘ್ರರನು ವಧಿಸುವ
ಗುರು ಮಧ್ವ ಸಿಂಹರನು ಎದುರಿಸಲು ಹೋಗಿ
ಹೆಸರಿನಲ್ಲಿ ಶಾರ್ದೂಲ ಮಾತ್ರದಂತಾದನು
 
ಪದ್ಮ ತೀರ್ಥಾದಿಗಳಿಂದ ಮಧ್ವಗ್ರಂಥಗಳ ಅಪಹರಣ
"ಶ್ರೀ" ಎಂಬ ಹೆಸರಿಂದ ದೌಪದಿಯು ಖ್ಯಾತಳು
"ಶಾಸ್ತ್ರ" ವೆಂಬುದು ಅವಳ ಮತ್ತೊಂದು ಹೆಸರು
ಸುಜ್ಞಾನಿ ಭೂಸುರರು ಆಕೆಯನ್ನು ಪಾಲಿಪರು
ಪದ್ಮತೀರ್ಥ ಎಂಬ ದುಷ್ಟ ಸೈಂಧವನೊಬ್ಬ
ದೌಪದಿಯ ಅಪಹರಿಸಿ ಕೊಂಡೊಯ್ಯುತಿಹನೆಂದು
ಮಧ್ವರೆಂಬುವ ಆ ಪಾರ್ಥ ಕೇಳಿದನು
 
ಜೇಷ್ಠಯತಿಗಳ ಕೂಡಿ ಆನಂದ ತೀರ್ಥರು
ಹಲವಾರು ಯೋಜನದ ದೂರವನು ಕ್ರಮಿಸಿ
 
ಪ್ರಾರವಾಟದಿ ಪದ್ಮತೀರ್ಥನನು ಸಂಧಿಸಿ
ವಾಗ್ದಾಣದಿಂದವನ ಅಂಜಿಸುತ ತಡೆದು
ಸಿರಿದೇವಿಯನ್ನವರು ಹಿಂದಿರುಗಿ ಪಡೆದು
ಹಾಸ್ಯ ಮಾಡಿದರವನ ವಾದ ವೈಖರಿಯ
 
ಹನ್ನೆರಡನೆಯ ಸರ್ಗ / 207
 
40
 
41
 
42
 
43