This page has not been fully proofread.

ಆನಂದ ತೀರ್ಥರ ವೇದವ್ಯಾಖ್ಯಾನಗಳು,
ವಾಕ್ಯ ಉಚ್ಚಾರಣೆಯು ಅತಿ ಮಧುರವಹುದು
ಎಲ್ಲವೂ ಸುಸ್ಪಷ್ಟ: ಕೇಳುಗರಿಗತಿ ಹಿತವು
ವಾಗ್ಗೇವಿ ಸರಸತಿ, ದೇವಗುರು, ಗರುಡರೂ
ಆಶ್ಚರ್ಯದಿಂದದನು ಬಣ್ಣಿಸುವರು
ನನ್ನಂಥ ಪಾಮರನು ಇನ್ನೆಂತು ಬಣ್ಣಿಪೆನು ?
 
ಇಂದ್ರಪುರಿಯ ಪರಾಭವ
 
ಉಲ್ಲಸಿತ ಚಿತ್ತರೂ ನಗೆಮೊಗದ ಬ್ರಾಹ್ಮಣರು
ಕಂಗೊಳಿಸಿ ಮೆರೆದಿದ್ದ ಆ ವಿಬುಧ ಸಭೆಯಲ್ಲಿ
ನಾಗದ ಬ್ರಹ್ಮನ ಹೋಲುವಾ ಪರಿಯಲ್ಲಿ
ಆನಂದ ತೀರ್ಥರು ಅರ್ಥ ಗರ್ಭಿತವಾಗಿ
ಶೃತಿಸಮೂಹವನು ವ್ಯಾಖ್ಯಾನಿಪುದ ಕೇಳಿ
ಪುಂಡರೀಕನ ಕುರಿತು ವಿಪ್ರರಿಂತೆಂದರು
 
"ಈ ಮಧ್ವಮುನಿಗಳು ಪರಿಪೂರ್ಣ ಪ್ರಜ್ಞರು
ಪರಿಪೂರ್ಣ ಪ್ರಜ್ಞೆಯಲಿ ವೇದಾರ್ಥ ನುಡಿದಿಹರು
ಇಂತಹ ಅದ್ಭುತವ ನಾವೆಂದೂ ಕೇಳಿಲ್ಲ
ಇಂಥ ಸುಜ್ಞಾನಿಗೆ ಎದುರಾಳಿಯೆ ನೀನು ?
ದಯಮಾಡಿ ಇಂತಹುದೇ ಅದ್ಭುತ ವ್ಯಾಖ್ಯಾನವನು
ನಮಗಾಗಿ ಶೃತಪಡಿಸು ಎಂದು ಬೇಡುವೆವು'
 
ಬ್ರಾಹ್ಮಣರ ಮನವಿಯನು ಕೇಳಿದಾ ದುರುಳನು
ಮಧ್ವಮುನಿಗಳ ಸಾಮ್ಯ ಪಡೆವುದಕೆ ಯತ್ನಿಸುತ
ಹಿಂದೊಮ್ಮೆ ಕೃಷ್ಣನ ಸಾಮ್ಯವನ್ನು ಬಯಸುತ್ತ
ಗರುಡವಾಹನವನ್ನು, ನಾಲ್ಕು ತೋಳುಗಳನ್ನು
ಶ್ರೀವತ್ಸ ಚಿಹ್ನೆಯನೂ ಕೃತಕದಲ್ಲಿ ಪಡೆದಿದ್ದ
ಪೌಂಡ್ರಕನ ಪರಿಯಲ್ಲಿ ನಗೆಪಾಟಲಾದನು
 
206 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39